Cinema

ತಿಪ್ಪನ ದರ್ಶನ ಪಡೆದ ಬಾಲಿವುಡ್‌ ಬೆಡಗಿ ಕಂಗಾನ ರಣಾವತ್

ಬಾಲಿವುಡ್‌: ನಟಿ ಕಂಗಾನ ರಣಾವತ್‌ ಒಂದೇಲ್ಲ ಒಂದು ಸುದ್ದಿಯಲ್ಲೇ ಇರುತ್ತಾರೆ. ಒಂದು ವಿವಾದಾತ್ಮಕ ಹೇಳಿ ನೀಡಿ ಸುದ್ದಿಯಲ್ಲಿ ಇರುತ್ತಾರೆ, ಇಲ್ಲವೆಂದರೆ ಸಾಮಾಜಿಕ ಕಾರ್ಯದಲ್ಲಿ ಇದ್ದಾಗ ಸುದ್ದಿಯಲ್ಲಿ ಇರುತ್ತಾರೆ. ಇದೀಗ ಅವರು ಮತ್ತೊಂದು ಸುದ್ದಿಯಲ್ಲಿ ಇದ್ದಾರೆ. ಇಂದು ಹೊಸ ವರ್ಷದ ಹಿನ್ನೆಲೆಯಲ್ಲಿ ಅವರು ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಈಗಾಗಲೇ ಅವರು ದೇವಸ್ಥಾನಕ್ಕೆ ಕಂಗಾನ ಭೇಟಿ ನೀಡಿದ್ದಾರೆ. ಅವರು ದೇವರ ಮೋರೆ ಹೋಗಿರುವುದು ಬಾರಿ ಚರ್ಚೆಗೆ ಗ್ರಾಸವಾಗಿದೆ. ಬಾಲಿವುಡ್‌ ನಲ್ಲಿ ಬಹುಬೇಡಿಕೆ ಇರುವಂತಹ ನಟಿಯಾಗಿದ್ದಾರೆ. ಇದೀಗ ಅವರು ತಿರುಪತಿ ತಿಮ್ಮಪ್ಪನ ದರ್ಶನ ಮಾಡಿರೋ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ. ದೇವಾಸ್ಥಾನಕ್ಕೆ ಕಂಗಾನ ರಣಾವತ್‌ ಸಂಪ್ರದಾಯಿಕ ಉಡುಗೆ ಅಂದರೆ ಸೀರೆಯಲ್ಲಿ ಉಟ್ಟುಕೊಂಡಿದ್ದಾರೆ. ಸೀರೆಯಲ್ಲಿ ಕಂಗಾನ ಫುಲ್‌ ಮಿಂಚುತ್ತಿದ್ದಾರೆ. ಈ ಉಡುಗೆಯಲ್ಲಿ ಕಂಗಾನ ನೋಡಿದ ಅಭಿಮಾನಿಗಳು ಸಖತ್‌ ಫಿದಾ ಆಗಿದ್ದಾರೆ.

Share Post