Politics

ರಾಹುಲ್‌ ಗಾಂಧಿ ಇಟಲಿ ಪ್ರವಾಸ – ಗಾಳಿ ಸುದ್ದಿ ಹಬ್ಬಿಸಬೇಡಿ : ರಣದೀಪ್‌ ಸಿಂಗ್

ನವದೆಹಲಿ : ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ತಮ್ಮ ವೈಯಕ್ತಿಕ  ಕಾರಣಗಳಿಗೆ ಇಟಲಿ ಪ್ರವಾಸ ಮಾಡಿದ್ದಾರೆ. ಕಾಂಗ್ರೆಸ್‌ ಪಕ್ಷದ ೧೩೭ನೇ ಸಂಸ್ಥಾಪನಾ ದಿನಾಚರಣೆಯ ಬಳಿಕ ಅವರು ಪ್ರವಾಸ ಕೈಗೊಂಡಿದ್ದಾರೆ.

ಈ ಬಗ್ಗೆ ಎಐಸಿಸಿ ಪ್ರಧಾನ ವಕ್ತಾರ ರಣದೀಪ್‌ ಸಿಂಗ್‌ ಪ್ರತಿಕ್ರಿಯಿಸಿದ್ದು, ʼರಾಹುಲ್‌ ಗಾಂಧಿ ಅಲ್ಪಾವಧಿಯ ವಿದೇಶ ಭೇಟಿಗೆ ತೆರಳಿದ್ದಾರೆ. ಬಿಜೆಪಿ ಮತ್ತು ಅವರ ಗೆಳೆಯರು ಅನಾವಶ್ಯಕ ಗಾಳಿ ಸುದ್ದಿಗಳನ್ನು ಹರಡಬಾರದುʼ ಎಂದು ಹೇಳಿದ್ದಾರೆ.

ಪಂಜಾಬ್‌ನ ಮೊಗಾದಲ್ಲಿ ಜನವರಿ ೩ರಂದು ನಡೆಯುವ ರ್ಯಾಲಿಯಲ್ಲಿ ರಾಹುಲ್‌ ಅವರು ಪಾಲ್ಗೊಳ್ಳಲಿದ್ದಾರೆ. ಆ ವೇಳೆಗೆ ಅವರು ಹಿಂದಿರುಗಲಿದ್ದಾರೆ ಎಂದು ತಿಳಿಸಿದ್ದಾರೆ.

Share Post