Districts

ಚುನಾವಣಾ ಗಿಮಿಕ್‌: ಕೈ ಅಭ್ಯರ್ಥಿಗೆ ವಾಮಾಚಾರ?

ಕೊಪ್ಪಳ: ಡಿಸೆಂಬರ್‌ 27 ರಂದು ಪುರಸಭೆ ಚುನಾವಣೆ ಹಿನ್ನೆಲೆ ಕೈ ಅಭ್ಯರ್ಥಿ ಫೋಟೋ ಇಟ್ಟು ವಾಮಾಚಾರ ಮಾಡಿರುವ ಘಟನೆ ಕೊಪ್ಪಳದ ಕಾರಟಗಿಯಲ್ಲಿ ನಡೆದಿದೆ. ಪುರಸಭೆ ವಾರ್ಡ್‌ ನಂಬರ್‌ 100ರ ಕಾಂಗ್ರೆಸ್‌ ಅಭ್ಯರ್ಥಿ ಮಂಜುನಾಥ್‌ ಮೇಗೂರು ಅವರ ಫೋಟೋ ಇಟ್ಟು ಇಂತಹ ರಣಹೇಡಿ ಕೆಲಸ ಮಾಡಿದ್ದಾರೆಂದು ಮಂಜುನಾಥ್‌ ಬೆಂಬಲಿಗರು ಆರೋಪಿಸಿದ್ದಾರೆ.

ಅವರು ಈ ಚುನಾವಣೆಯಲ್ಲಿ ಸೋಲಬೇಕೆಂದು ಇಂತಹ ಹೀನಾಯ ಕೆಲಸಕ್ಕಿಳಿದಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ರು. ಮಂಜುನಾಥ್‌ ಅವರ ಭಾವಚಿತ್ರವಿರುವ ಕರಪತ್ರದ ಜೊತೆಗೆ ಅರಿಶಿನ, ಕುಂಕುಮ, ನಿಂಬೆಹಣ್ಣು, ತೆಂಗಿನಕಾಯಿ, ಎಲೆ ಅಡಿಕೆ ಇಟ್ಟು, ಕುಂಬಳಕಾಯಿ ಒಡೆದು ವಾಮಾಚಾರ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.

Share Post