CrimeDistricts

ಭೀಕರ ರಸ್ತೆ ಅಪಘಾತಕ್ಕೆ ಮೂವರು ಬಲಿ, ಇಬ್ಬರಿಗೆ ಚಿಕಿತ್ಸೆ

ಬೆಳಗಾವಿ: ವಿಧಿ ಬಹಳ ಕ್ರೂರಿಯಾಗಿ ವರ್ತಿಸುತ್ತೆ, ಆಚೆ ಹೋದವರು ಮನೆಗೆ ವಾಪಸ್‌ ಬರ್ತಾರೆ ಎಂಬ ನಂಬಿಕೆಯೇ ಇಲ್ಲವಾಗಿದೆ. ಅಪಘಾತಗಳು ಅರಿವಿಲ್ಲದೆಯೇ ನಡೆದು ಹೋಗುತ್ತವೆ. ಇಂದು ನಿಂತಿದ್ದ ಲಾರಿಗೆ ವೃಗವಾಗಿ ಬಂದು ಕಾರು ಡಿಕ್ಕಿನ ಹೊಡೆದ ಪರಿಣಾಮವಾಗಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಘಟನೆ ಬೆಳಗಾವಿಯ ಹಿರೇಬಾಗೇವಾಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಇನ್ನು ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತಪಟ್ಟವರು ಸೈಯ್ಯದ್‌ ಇಸ್ಮಾಯಿಲ್‌ ದಾವೂಸ್‌, ಸುಶೀಲಾ ಡಿಕೋಸ್ತಾ, ವಾಸಿಂ ಹುಸೇನ್‌ ಖಾನ್‌ ಎಂದು ಗುರುತಿಸಲಾಗಿದೆ. ಜಾವೀದ್‌ ದಾವೂದ್‌ ಹಾಗೂ ಯೂಸುಫ್‌ ಸೈಯ್ಯದ್‌ ಗಾಯಗೊಂಡಿದ್ದಾರೆ. ಇನ್ಧಾನು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಧಾರವಾಡದಿಂದ ಬೆಳಗಾವಿಗೆ ಹೋಗುವ ಮಾರ್ಗ ಮಧ್ಯದಲ್ಲಿ ವೇಗವಾಗಿ ಬಂದು ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Share Post