Sports

ರೋಹಿತ್‌-ಜಡ್ಡು ಬೆಂಗಳೂರಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ

ಬೆಂಗಳೂರು : ಗಾಯದ ಸಮಸ್ಯೆಯಿಂದ ದ.ಆಫ್ರಿಕಾ ಪ್ರವಾಸಕ್ಕೆ ಹೋಗದೆ ಉಳಿದಿರುವ ಜಡೇಜಾ ಮತ್ತು ರೋಹಿತ್‌ ಶರ್ಮ ಇಂದು ಬೆಂಗಳೂರಲ್ಲಿ ಕಾಣಿಸಿಕೊಂಡರು. ಸ್ನಾಯು ಸೆಳೆತದ ಕಾರಣ ರೋಹಿತ್‌ಗೆ ೩ ರಿಂದ ೪ ವಾರಗಳ ವಿಶ್ರಾಂತಿಯ ಅಗತ್ಯವಿದೆ. ಮೊಣಕಾಲಿಗೆ ಗಾಯ ಮಾಡಿಕೊಂಡಿರುವ ಜಡೇಜಾ ಅವರಿಗೂ ವಿಶ್ರಾಂತಿ ಬೇಕಿದೆ

ಗಾಯದಿಂದ ಚೇತರಿಸಿಕೊಳ್ಳಲು ಈ ಇಬ್ಬರು NCA ಅಕ್ಯಾಡೆಮಿಗೆ ಬಂದಿದ್ದಾರೆ. ಇತ್ತೀಗಷ್ಟೇ ವಿವಿಎಸ್‌ ಲಕ್ಷ್ಮಣ್‌ NCA  ಜವಾಬ್ದಾರಿ ವಹಿಸಿಕೊಂಡಿದ್ದರು. ವಿವಿಎಸ್‌ ಅವರ ನಿರ್ದೇಶನದಲ್ಲಿಯೇ ಅಭ್ಯಾಸ ಆರಂಭಿಸಿದ್ದಾರೆ ರೋಹಿತ್‌  ಹಾಗೂ ಜಡೇಜಾ

ಆದಷ್ಟು ಬೇಗ ಫಿಟ್‌ ಆಗಿ ತಂಡಕ್ಕೆ ಕಮ್‌ಬ್ಯಾಕ್‌ ಮಾಡುವ ತವಕದಲ್ಲಿದ್ದಾರೆ ಈ ಇಬ್ಬರು.

Share Post