CrimeNational

ಬಾವಿಗೆ ಬಿತ್ತು ಕಾರು; ನವದಂಪತಿ ಪಾರಾಗಿ ಬಂದದ್ದೇ ಪವಾಡ!

ಕೊಚ್ಚಿನ್;‌ ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ.. ನವ ದಂಪತಿ ಇದ್ದ ಕಾರು ನೇರವಾಗಿ 15 ಅಡಿ ಆಳದ ಪಾಳು ಬಾವಿಗೆ ಬಿದ್ದಿದೆ.. ಆದ್ರೆ ಆ ದಂಪತಿಯ ಅದೃಷ್ಟ ನೆಟ್ಟಗಿತ್ತು.. ಇಡೀ ಕಾರು ಬಾವಿಯೊಳಗೆ ಬಿದ್ದು ಸಿಕ್ಕಿಕೊಂಡರೂ, ಇಬ್ಬರೂ ಪವಾಡ ಸದೃಷ ರೀತಿಯಲ್ಲಿ ಪಾರಾಗಿ ಬಂದಿದ್ದಾರೆ.. ಕೇರಳದ ಎರ್ನಾಕುಲಂ ಜಿಲ್ಲೆ ಕೋಲೆಂಚೇರಿ ಎಂಬಲ್ಲಿ ಈ ಘಟನೆ ನಡೆದಿದೆ..
ಕಾರ್ತೀಕ್‌ ಹಾಗೂ ವಿಸ್ಮಯಾ ಎಂಬ ದಂಪತಿಯೇ ಪ್ರಾಣಾಪಾಯದಿಂದ ಪಾರಾಗಿ ಬಂದ ದಂಪತಿ.. ಇವರು ಎರಡು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು.. ಕಾರ್ತೀಕ್‌ ತಿರುವನಂತಪುರದ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಕೆಲಸ ಮಾಡಿದರೆ, ವಿಸ್ಮಯಾ ಕೃಷಿ ವಿದ್ಯಾರ್ಥಿಯಾಗಿದ್ದಾರೆ.. ಇಬ್ಬರೂ ಕಾರಿನಲ್ಲಿ ಮನೆಗೆ ತೆರಳುತ್ತಿದ್ದಾಗ, ಕಾರು ನಿಯಂತ್ರಣ ತಪ್ಪಿ ಪಾಳುಬಿದ್ದ ಬಾವಿಗೆ ಬಿದ್ದಿದೆ..
ಕೊಟ್ಟಾರಕದಿಂದ ಅಲುವಾಗೆ ಕಾರಿನಲ್ಲಿ ತೆರಳುತ್ತಿದ್ದಾಗ ಕೋಲೆಂಚೇರಿ ಎಂಬಲ್ಲಿ ಕಾರು ನಿಯಂತ್ರಣ ತಪ್ಪಿ ಕಾರು ಬಾವಿಗೆ ಬಿದ್ದಿದೆ.. ಕಾರು ಬಾವಿಗೆ ಬಿದ್ದ ದೃಶ್ಯ ನೋಡಿದ ಸ್ಥಳೀಯರು ತಕ್ಷಣವೇ ರಕ್ಷಣೆಗೆ ಧಾವಿಸಿದ್ದಾರೆ.. ಕಾರಿನಲ್ಲಿ ಸಿಲುಕಿದ್ದ ಇಬ್ಬರನ್ನೂ ರಕ್ಷಣೆ ಮಾಡಲಾಗಿದೆ..

Share Post