BengaluruCrime

ಅಪ್ಪ-ಮಗನ ಎಣ್ಣೆ ಪಾರ್ಟಿ!; ಮತ್ತಲ್ಲಿ ತಂದೆಯನ್ನೇ ಕೊಂದ ಮಗ!

ಆನೇಕಲ್(ಬೆಂಗಳೂರು ಗ್ರಾಮಾಂತರ); ಅಪ್ಪ-ಮಗ ಒಟ್ಟಿಗೆ ಕುಳಿತು ಎಣ್ಣೆ ಪಾರ್ಟಿ ಮಾಡಿದ್ದು, ನಡುವೆ ಮತ್ತೇರಿದಾಗ ಯಾವುದೋ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ.. ಇದು ತಾರಕಕ್ಕೇರಿ ಮಗನೇ ಅಪ್ಪನನ್ನು ಕೊಲೆ ಮಾಡಿದ್ದಾನೆ.. ಕ್ಷುಲ್ಲಕ ಕಾರಣಕ್ಕೆ ನಡೆದ ಈ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ..
ಬೆಂಗಳೂರು ಹೊರವಲಯದ ಆನೆಕಲ್‌ ಬಳಿ ಬನ್ನೇರುಘಟ್ಟ ಪೋಸ್ಟ್‌ ಆಫೀಸ್‌ ರಸ್ತೆಯ ಜನತಾ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.. ಅಪ್ಪ-ಮಗ ತುಂಬಾನೇ ಕ್ಲೋಸ್‌ ಆಗಿದ್ದರು.. ಹೀಗಾಗಿ ಇಬ್ಬರೂ ಒಟ್ಟಿಗೆ ಕುಳಿತು ಕುಡಿಯುವಷ್ಟೇ ಆತ್ಮೀಯತೆ ಅವರಿಬ್ಬರಲ್ಲಿ ಇತ್ತು.. ಇದೇ ಒಂದು ಜೀವ ತೆಗೆಯಲು ಕಾರಣವಾಗಿದೆ.. 76 ವರ್ಷದ ವೇಲಾಯುದನ್‌ ಕೊಲೆಯಾದ ವ್ಯಕ್ತಿಯಾಗಿದ್ದಾರೆ.. ಅವರ ಮಗ ವಿನೋದ್‌ ಕುಮಾರ್‌ ಆರೋಪಿಯಾಗಿದ್ದಾನೆ..
ಇವರು ಮೂಲತಃ ಕೇರಳ ಮೂಲದ ಏರಿಮಲೆಯವರು.. ಕೆಲಸ ಅರಸಿಕೊಂಡು ಬೆಂಗಳೂರಿಗೆ ಬಂದು ಹಲವು ವರ್ಷಗಳಾಗಿದ್ದವು.. ವಯಸ್ಸಾದ ತಂದೆಯನ್ನು ಇಬ್ಬರು ಗಂಡು ಮಕ್ಕಳು ನೋಡಿಕೊಳ್ಳುತ್ತಿದ್ದರು.. ಹಿರಿಯ ಮಗನಂತೂ ಅಪ್ಪನ ಜೊತೆ ಆಪ್ತನಾಗಿದ್ದು, ಅಪ್ಪನ ಜೊತೆಯೇ ಕುಳಿತು ಎಣ್ಣೆ ಹೊಡೆಯುತ್ತಿದ್ದ.. ಅದರಂತೆ ಮೊನ್ನೆ ರಾತ್ರಿ ಕೂಡಾ ಇಬ್ಬರೂ ಒಟ್ಟಿಗೆ ಕುಳಿತು ಎಣ್ಣೆ ಪಾರ್ಟಿ ಮಾಡಿದ್ದಾರೆ.. ಇಬ್ಬರಿಗೂ ಮತ್ತೇರಿದ್ದಾಗ ಯಾವುದೋ ಕ್ಷುಲ್ಲಕ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ.. ಇದೇ ವೇಳೆ ಮಗ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ಬಂದು ಅಪ್ಪನ ಎದೆ ಹಾಗೂ ಹೊಟ್ಟೆಗೆ ಇರಿದಿದ್ದಾನೆ.. ಇದರಿಂದ ತೀವ್ರ ರಕ್ತಸ್ರಾವವಾಗಿ ವೇಲಾಯುದನ್‌ ಸಾವನ್ನಪ್ಪಿದ್ದಾರೆ..

Share Post