CrimeDistricts

ಪ್ರಿಯಕರನಿಗಾಗಿ ಗಂಡನನ್ನು ಜೈಲಿಗೆ ಕಳುಹಿಸಲು ಮಹಿಳೆ ಮೆಗಾ ಪ್ಲ್ಯಾನ್‌!

ಹಾಸನ; ಆ ವಿವಾಹಿತ ಮಹಿಳೆ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದಳು.. ಆಕೆಯ ಅಕ್ರಮ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದ.. ಹೀಗಾಗಿ ಆತನನ್ನು ಜೈಲಿಗೆ ಕಳುಹಿಸಲು ಪ್ಲ್ಯಾನ್‌ ಮಾಡಿದ್ದಳು.. ಆ ಮಹಿಳೆ ತನ್ನ ಪ್ರಿಯಕರನ ಮುಖಾಂತರ ತನ್ನ ಗಂಡನಿಗೆ ಗಾಂಜಾ ಕೊಡಿಸಿದ್ದಾಳೆ.. ಅನಂತರ ಗಂಡ ಗಾಂಜಾ ವ್ಯವಹಾರ ನಡೆಸುತ್ತಿರುವ ಬಗ್ಗೆ ಯಾರ ಮುಖಾಂತರವೋ ಪೊಲೀಸರಿಗೆ ತಿಳಿಸಿದ್ದಾಳೆ.. ಆಕೆಯ ಉದ್ದೇಶ ಗಂಡ ಜೈಲಿಗೆ ಹೋದರೆ ಇಲ್ಲಿ, ಪ್ರಿಯಕರನ ಜೊತೆ ಎಂಜಾಯ್‌ ಮಾಡಬಹುದು ಅನ್ನೋದು.. ಆದ್ರೆ, ಪೊಲೀಸರ ತನಿಖೆಯಿಂದ ಕೇಸ್‌ ಉಲ್ಟಾ ಆಗಿದೆ.. ಮಹಿಳೆ ಹಾಗೂ ಆಕೆಯ ಪ್ರಿಯಕರನೇ ಜೈಲು ಸೇರುವಂತಾಗಿದೆ..
ಮುಕ್ತಾರ್‌ ಅಲಿ ಎಂಬಾತನೇ ಆ ಮಹಿಳೆ ಪತಿ.. ಈತ ಮೂಲತಃ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ನಿವಾಸಿ.. ಆದ್ರೆ ಈಗ ಕುಟುಂಬದ ಸದಸ್ಯರನ್ನು ಸಾಕೋದಕ್ಕಾಗಿ ಹಾಸನದ ಸಕಲೇಶಪುರದ ಕಾಫಿ ತೋಟದಲ್ಲಿ ಕೆಲಸಕ್ಕೆ ಸೇರಿದ್ದ.. ಆದ್ರೆ ಈತನ ಪತ್ನಿ ಮಾತ್ರ ಮೂಡಿಗೆರೆಯಲ್ಲೇ ಇದ್ದಳು.. ಆಕೆಯ ಜೊತೆ ಮಹ್ಮದ್‌ ಎಂಬಾತನ ಸ್ನೇಹ ಬೆಳೆಸಿದ್ದಾನೆ.. ಮಹ್ಮದ್‌ ಆಗಾಗ ಆಕೆಯ ಮನೆಗೆ ಬಂದು ಹೋಗುತ್ತಿದ್ದನಂತೆ.. ಇದನ್ನು ನೋಡಿದ ಕೆಲವರು ಸಕಲೇಶಪುರದ ಕಾಫಿ ತೋಟದಲ್ಲಿ ಕೆಲಸ ಮಾಡುವ ಮಹಿಳೆಯ ಗಂಡನಿಗೆ ಮಾಹಿತಿ ನೀಡಿದ್ದಾರೆ.. ಗಂಡ ಮುಕ್ತಾರ್‌ ಈ ವಿಚಾರವಾಗಿ ಹೆಂಡತಿಗೆ ಎಚ್ಚರಿಕೆ ಕೊಟ್ಟಿದ್ದಾನೆ.. ಮಹ್ಮದ್‌ಗೂ ಕೂಡಾ ವಾರ್ನಿಂಗ್‌ ಮಾಡಿದ್ದಾನೆ..
ಇದರಿಂದ ಅವರ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದೆ.. ಇದ್ರಿಂದ ಮುಕ್ತಾರ್‌ ಅಲಿ ಮೇಲೆ ಮಹ್ಮದ್‌ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾನೆ.. ಅದಕ್ಕೆ ಪ್ರೇಯಸಿ ಕೂಡಾ ಸಾಥ್‌ ಕೊಟ್ಟಿದ್ದಾಳೆ.. ಹೇಗಾದರೂ ಮಾಡಿ ಮುಕ್ತಾರ್‌ನನ್ನು ಜೈಲಿಗೆ ಕಳುಹಿಸಿದರೆ ನಾವು ಇಲ್ಲಿ ಚೆನ್ನಾಗಿ ಎಂಜಾಯ್‌ ಮಾಡಬಹುದು ಎಂದು ಅವರು ಮಾತಾಡಿಕೊಂಡಿದ್ದಾರೆ.. ಅದಕ್ಕಾಗಿ ಗಂಡನನ್ನು ಗಾಂಜಾ ಕೇಸ್‌ನಲ್ಲಿ ಸಿಲುಕಿಸಲು ಮಹಿಳೆ ಮುಂದಾಗಿದ್ದಾಳೆ.. ಅದಕ್ಕೆ ಪ್ರಿಯಕರ ಮಹ್ಮದ್‌ ಹಾಗೂ ಇತರ ಮೂವರು ಸಾಥ್‌ ನೀಡಿದ್ದಾರೆ..
KA-18-P-9557 ನಂಬರ್‌ನ ಥಾರ್ ವಾಹನದಲ್ಲಿ ಮಹ್ಮದ್‌ ಗಾಂಜಾ ತರಿಸಿದ್ದಾನೆ.. ಅದನ್ನು ಬೇರೆಯವರ ಮುಖಾಂತರ ಮುಕ್ತಾರ್‌ ಅಲಿಗೆ ನೀಡಿದ್ದಾನೆ.. ಅನಂತರ ಮುಕ್ತಾರ್‌ ಅಲಿ ಗಾಂಜಾ ಮಾರಾಟ ಮಾಡುತ್ತಾನೆ ಎಂದು ಯಾರದೋ ಮುಖಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.. ಆದ್ರೆ ಪೊಲೀಸರಿಗೆ ಅನುಮಾನ ಬಂದಿದ್ದು, ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.. ಆದ್ರೆ ಅವರು ಸತ್ಯ ಏನು ಅನ್ನೋದನ್ನು ಹೇಳಿದ್ದಾರೆ.. ಸದ್ಯ ಪೊಲೀಸರು ನಾಲ್ವರನ್ನೂ ಬಂಧಿಸಿ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ..

Share Post