CrimeInternationalLifestyle

ಮೋದಿ ಸಮರ್ಪಿಸಿದ್ದ ಕಾಳಿ ದೇವಿಯ ಚಿನ್ನದ ಕಿರೀಟ ಕಳವು!

ಬಾಂಗ್ಲಾದೇಶ; ಪ್ರಧಾನಿ ನರೇಂದ್ರಮೋದಿಯವರು ಬಾಂಗ್ಲಾದೇಶದಲ್ಲಿರುವ ಕಾಳಿದೇವಿಗೆ ಸಮರ್ಪಿಸಿದ್ದ ಚಿನ್ನದ ಕಿರೀಟವನ್ನು ಕಳವು ಮಾಡಲಾಗಿದೆ.. ನವರಾತ್ರಿ ಸಂಭ್ರಮದ ವೇಳೆಯೇ ಈ ಘಟನೆ ನಡೆದಿದೆ.. ಬಾಂಗ್ಲಾದೇಶದ ಸತ್ಖಿರಾ ನಗರದ ಶ್ಯಾಮನಗರದಲ್ಲಿರುವ ಪ್ರಸಿದ್ಧ ಜೇಶೋರೇಶ್ವರಿ ಕಾಳಿ ದೇವಿಯ ಕಿರೀಟವನ್ನು ಕಳ್ಳತನ ಮಾಡಲಾಗಿದೆ.. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ..
2021ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದರು.. ಈ ವೇಳೆ ಈ ದೇಗುಲದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು.. ಇದೇ ವೇಳೆ ದೇವಿಗೆ ಚಿನ್ನದ ಕಿರೀಟವನ್ನು ಸಮರ್ಪಣೆ ಮಾಡಿದ್ದರು.. ಗುರುವಾರ ಮಧ್ಯಾಹ್ನ 2.45ರ ಸುಮಾರಿಗೆ ಕಳ್ಳನೊಬ್ಬ ದೇವಿಗೆ ತೊಡಿಸಿದ್ದ ಕಿರೀಟವನ್ನು ಹೊತ್ತೊಯ್ದಿದ್ದಾನೆ..

Share Post