BengaluruCrime

ಸಿಕ್ಕವರ ಮೇಲೆಲ್ಲಾ ಬೇಸ್‌ ಬಾಲ್‌ ಬ್ಯಾಟ್‌ನಿಂದ ಹಲ್ಲೆ!; ಇವನೇನು ಮಾನಸಿಕ ಅಸ್ವಸ್ಥನಾ..?

ಬೆಂಗಳೂರು; ಯುವಕನೊಬ್ಬ ಮಾನಸಿಕ ಅಸ್ವಸ್ಥನಂತೆ ವರ್ತಿಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿದ್ದಾನೆ.. ಬೆಂಗಳೂರಿನ ಕುಂದಲಹಳ್ಳಿ ಬಳಿಯ ಬ್ರಿಗೇಡ್‌ ಟೆಕ್‌ ಗಾರ್ಡನ್‌ ಬಳಿ ಯುವಕನೊಬ್ಬ ಬೇಸ್‌ ಬಾಲ್‌ ಬ್ಯಾಟ್‌ ಹಿಡಿದು ಬಂದು, ಸಿಕ್ಕ ಸಿಕ್ಕವರ ಮೇಲೆಲ್ಲಾ ಹಲ್ಲೆ ಮಾಡಿದ್ದಾನೆ.. ಯುವಕನ ಈ ವರ್ತನೆಯಿಂದ ಸ್ಥಳದಲ್ಲಿ ಕೆಲಸಮಯ ಭೀತಿಯ ವಾತಾವರಣ ನಿರ್ಮಾಣ ಆಗಿತ್ತು..
ಕಳೆದ ರಾತ್ರಿ 8.20ರ ಸುಮಾರಿಗೆ ಈ ಘಟನೆ ನಡೆದಿದೆ.. ರೌಡಿಯಂತೆ ವರ್ತಿಸುತ್ತಿದ್ದ ಯುವಕ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದವರ ಮೇಲೆಲ್ಲಾ ಬ್ಯಾಟ್‌ ಬೀಸುತ್ತಾ ಹಲ್ಲೆ ನಡೆಸುತ್ತಾ ಹೋಗಿದ್ದಾನೆ.. ಇದರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದನ್ನು ವ್ಯಕ್ತಿಯೊಬ್ಬರು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ..
ಪೊಲೀಸರಿಗೂ ಟ್ಯಾಗ್‌ ಮಾಡಲಾಗಿದ್ದು, ಪೊಲೀಸರು ಘಟನೆಯ ಬಗ್ಗೆ ಮತ್ತಷ್ಟಯ ಮಾಹಿತಿ ನೀಡುವಂತೆ ವ್ಯಕ್ತಿ ಬಳಿ ಕೇಳಿದ್ದಾರೆ.. ಮಾಹಿತಿ ಪಡೆದ ಪೊಲೀಸರು ಆರೋಪಿಯ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ..

Share Post