AstrologyEconomy

ಸಾಲ ಬಾಧೆಯಿಂದ ಒದ್ದಾಡುತ್ತಿದ್ದೀರಾ..?; ಹಾಗಾದರೆ ಈ ಮಂತ್ರ ಪಠಿಸಿ ಸಾಕು..

ಬೆಂಗಳೂರು; ಸರಿಯಾದ ಆರ್ಥಿಕ ನಿರ್ವಹಣೆ ಮಾಡದವರು ಎಷ್ಟೇ ಸಂಪಾದನೆ ಮಾಡಿದರೂ ಸಾಲದ ಸುಳಿಗೆ ಸಿಲುಕಿ ಬಿಡುತ್ತಾರೆ.. ಸಂಪಾದನೆಯ ದುಪ್ಪಟ್ಟನ್ನು ಖರ್ಚು ಮಾಡುತ್ತಾ ಹೋಗಿ ಕೊನೆಗೆ ಮಾಡಿದ ಸಾಲ ತೀರಿಸಲಾಗದೇ, ಸಂಪಾದಿಸಿದ್ದನ್ನೆಲ್ಲಾ ಬಡ್ಡಿಗೇ ಕಟ್ಟುವಂತಾಗುತ್ತದೆ.. ಇದು ಅವರೇ ತಂದುಕೊಂಡ ಕಷ್ಟವಾದರೂ, ಜಾತಕ ಸಮಸ್ಯೆ, ಗ್ರಹಗಳ ಸಮಸ್ಯೆಯೂ ಅವರನ್ನೂ ಆ ರೀತಿ ಮಾಡಿರುವ ಸಾಧ್ಯತೆ ಇರುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ..
ಸಾಲ ಬಹುಬೇಗ ತೀರಿಸೋದಕ್ಕೆ ಜ್ಯೋತಿಷಿಗಳು ಒಂದಷ್ಟು ಸುಲಭ ವಿಧಾನಗಳನ್ನು ಹೇಳಿಕೊಟ್ಟಿದ್ದಾರೆ.. ಒಂದೇ ಒಂದು ಮಂತ್ರ ಪಠಿಸಿದರೆ ಕೇವಲ ಮೂವತ್ತು ದಿನಗಳ ಸಾಲ ತೀರುತ್ತಂತೆ.. ಭೈರವನ 64 ಅವತಾರಗಳಲ್ಲಿ ಕಾಲಭೈರವ ಪ್ರಮುಖವಾದವನು. ಕಾಲವನ್ನು ಸೂಚಿಸುವ ಈ ಕಲ ಭೈರವ ಎಲ್ಲರ ಗ್ರಹಗತಿಗಳನ್ನು ಬದಲಾಯಿಸಿ ಒಳ್ಳೆಯ ದಾರಿಗೆ ತರುತ್ತಾನೆ ಎಂಬ ನಂಬಿಕೆ ಇದೆ.. ಹೀಗಾಗಿ ಕಾಲ ಭೈರವನನ್ನು ಪೂಜಿಸುವುದರ ಜೊತೆ, ಕಾಲ ಭೈರವನ ಮಂತ್ರಗಳನ್ನು ಜಪಿಸಿದರೆ ಸಾಲದಿಂದ ಬಹುಬೇಗ ಮುಕ್ತಿ ಪಡೆಯಬಹುದು ಎಂದು ಜ್ಯೋತಿಷಿಗಳು ಹೇಳುತ್ತಾರೆ..
ಶನಿವಾರ ಕಾಲ ಭೈರವನ ಪೂಜೆ ಹಾಗೂ ಆರಾಧನೆ ಮಾಡುವುದರಿಂದ ಶನಿಯ ಕಾಟ ತಪ್ಪುತ್ತದೆ.. ಶತ್ರುಬಾಧೆ, ಜೀವಭಯ ಹೋಗುತ್ತದೆ.. ಧೈರ್ಯ ಹೆಚ್ಚಾಗುತ್ತದೆ.. ಸಾಲ ತೀರಿಸುವ ಶಕ್ತಿಯನ್ನು ದೇವರು ಪ್ರಸಾದಿಸುತ್ತಾನೆ.. ಮನಸ್ಸಿನಲ್ಲಿರುವ ಎಲ್ಲಾ ನಕಾರಾತ್ಮಕ ಶಕ್ತಿಗಳೂ ಕೂಡಾ ದೂರವಾಗುತ್ತವೆ.. ಸಕಾರಾತ್ಮಶಕ್ತಿಗಳ ಪ್ರಭಾವ ಹೆಚ್ಚಾಗುತ್ತಾ ಹೋಗುತ್ತದೆ.. ಇದಕ್ಕಾಗಿ ನೀವು ಪ್ರತಿ ಶನಿವಾರ ಉಪವಾಸವಿದ್ದು, ಕಾಲ ಭೈರವ ಆರಾಧನೆ ಮಾಡಬೇಕು.. ಕಾಲ ಭೈರವನಿಗೆ ಸಂಬಂಧಿಸಿದ ಸ್ತೋತ್ರಗಳನ್ನು ಪಠಣೆ ಮಾಡಬೇಕು..
ಕಾಲ ಭೈರವನ ಒಂದು ಮಂತ್ರ ಪಠಿಸಿದರೆ ಸಾಕು ಎಲ್ಲಾ ಸಂಕಷ್ಟಗಳೂ ಮಾಯವಾಗುತ್ತವೆ ಎಂದು ಹೇಳಲಾಗುತ್ತದೆ.. ಮಂತ್ರವನ್ನು ಮೊದಲು ಒಂದು ಪುಸ್ತಕದಲ್ಲಿ ಬರೆದಿಟ್ಟುಕೊಳ್ಳಬೇಕು.. ಅದರಕ್ಕೆ ಅರಿಶಿನ ಕುಂಕುಮ ಹಚ್ಚಿ ಪೂಜೆ ಮಾಡಬೇಕು.. ಒಂದು ಹೂವು ಇಟ್ಟು ಭಕ್ತಿಯಿಂದ ಪೂಜೆ ಮಾಡಬೇಕು.. ನಂತರ ಈ ಕೆಳಗಿನ ಮಂತ್ರ ಪಠಣ ಮಾಡಬೇಕು..
” ಓಂ ನಮೋ ಭಗವತೇ ಸ್ವರ್ಣಕರ್ಷಣಾಯ ಧನ ಧಾನ್ಯಂ ವೃದ್ಧಿ ಕರಾಯ ಶೀಘ್ರ ಧನ ಧಾನ್ಯಂ ಸ್ವರ್ಣಂ ದೇಹಿ ದೇಹಿ ವ್ಯಸ್ಯ ವ್ಯಸ್ಯ ಕುರು ಕುರು ಸ್ವಾಹ ” ಇದು ಅತ್ಯಂತ ಶಕ್ತಿಶಾಲಿ ಮಂತ್ರ. ಇದಕ್ಕೆ ವಿಶೇಷ ಶಕ್ತಿ ಇದೆ. ಈ ಮಂತ್ರವನ್ನು ಯಾರು ಬೇಕಾದರೂ ಪಠಿಸಬಹುದು. ಈ ಮಂತ್ರ ಪಠಣೆಗೆ ಲಿಂಗ ಭೇದವಿಲ್ಲ. ಹೆಣ್ಣು ಮಕ್ಕಳು ಅಥವಾ ಗಂಡು ಮಕ್ಕಳು, ತೃತೀಯಲಿಂಗಿಗಳು ಯಾರೇ ಆಗಲಿ ಈ ಮಂತ್ರವನ್ನು ಪಠಿಸಬಹುದು. ನಿಮ್ಮ ಯಾವ ಕೋರಿಕೆ ಈಡೇರಬೇಕು ಅಂದುಕೊಂಡಿದ್ದೀರೋ ಅದನ್ನ ನೆನೆಸಿಕೊಂಡು ಮಂತ್ರವನ್ನು ಹೇಳಿದರೆ ಅದಕ್ಕೆ ಪರಿಹಾರ ಸಿಗುತ್ತದೆ.. ವಿಶೇಷವಾಗಿ ಸಾಲ ಬಹುಬೇಗ ತೀರುವಂತೆ ಮಾಡುತ್ತದೆ..
ಈ ಕಾಲ ಭೈರವನ ಮಂತ್ರವನ್ನು ಮರದ ಪೀಠದ ಮೇಲೆ ಪೂರ್ವಾಭಿಮುಖವಾಗಿ ಕೂತು ಹೇಳಬೇಕು.. ದಿನಕ್ಕೆ ಸುಮಾರು 108 ಬಾರಿ ಜಪಿಸಬೇಕು.. ಅನಂತರವೇ ನಿಮ್ಮ ದಿನದ ಕೆಲಸ ಆರಂಭ ಮಾಡಿದರೆ ಒಳ್ಳೆಯದು.. ಇದರಿಂದ ನಿಮ್ಮ ಸಂಕಷ್ಟಗಳು ನಿವಾರಣೆಯಾಗುತ್ತವೆ..
ಇನ್ನೂ ವಿಶೇಷವಾಗಿ ಸಾಲ ಬಾಧೆಯಿಂದ ಮುಕ್ತಿ ಪಡೆಯಲು ಮತ್ತೊಂದು ಪವರ್‌ಫುಲ್‌ ಮಂತ್ರ ಇದೆ.. ಈ ಮಂತ್ರವನ್ನು ಪಠಣೆ ಮಾಡುವುದರಿಂದ ಆರ್ಥಿಕವಾಗಿ ನೀವು ಸದೃಢರಾಗುತ್ತೀರಿ.. ಇದನ್ನ ಸ್ವರ್ಣಾಕರ್ಷಣ ಭೈರವ ಮಂತ್ರ ಅಂತ ಕರೆಯುತ್ತಾರೆ.
” ಓಂ ಶ್ರೀಂ ಹ್ರೀಂ ಕ್ಲೀಂ ಓಂ ನಮೋ ಭಗವತೇ ಸ್ವರ್ಣಾಕರ್ಷಣ ಭೈರವಾಯ ಹಿರಣ್ಯಂ ದಾಪಯ ದಾಪಯ ಶ್ರೀಂ ಹ್ರೀಂ ಕ್ಲೀಂ ಸ್ವಾಹಾ ”
ಈ ಮಂತ್ರವನ್ನು ಯಾವುದೇ ಕೆಲಸ ಪ್ರಾರಂಭಿಸುವ ಮೊದಲು ಭಕ್ತಿಯಿಂದ 21 ಬಾರಿ ಹೇಳಿದರೆ ನಿಮ್ಮ ಸಾಲಗಳು ಬಹುಬೇಗ ತೀರುತ್ತವೆ… ನಿಮ್ಮ ಸಂಕಷ್ಟ ನಿವಾರಣೆಯಾಗುತ್ತದೆ.. ತಟ್ಟೆಯಲ್ಲಿ ಅಕ್ಕಿಯನ್ನು ಇಡಬೇಕು. ಅದರ ಸುತ್ತ ಗಂಧ, ಕುಂಕುಮವನ್ನು ಹಚ್ಚಬೇಕು. ತೆಂಗಿನ ಕಾಯಿ ಒಡೆದು ಅದರ ಎರಡು ಹೋಳುಗಳನ್ನು ಅಕ್ಕಿ ಇರುವ ತಟ್ಟೆಯಲ್ಲಿ ಇಡಬೇಕು. ಇದಕ್ಕೂ ಗಂಧ ಹಚ್ಚಿ ದೀಪದ ಎಣ್ಣೆಯನ್ನು ತೆಂಗಿನಕಾಯಿ ಹೋಳುಗಳಿಗೆ ಹಾಕಿ ಬತ್ತಿ ಹಾಕಿ ಹಚ್ಚವೇಕು. ಇದನ್ನು ಭೇರವ ದೀಪಂ ಎಂದು ಕರೆಯುತ್ತಾರೆ.. ಹೀಗೆ ಮಾಡುವುದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳು ಬೇಗ ನಿವಾರಣೆಯಾಗುತ್ತವೆ..

Share Post