CrimeNational

ಮತ್ತೊಮ್ಮೆ ರೈಲು ದುರಂತಕ್ಕೆ ಸಂಚು!; ಹಳ್ಳಿ ಮೇಲೆ ಮಣ್ಣಿನ ರಾಶಿ!

ಉತ್ತರ ಪ್ರದೇಶ; ದೇಶದಲ್ಲಿ ರೈಲು ದುರಂತ ನಡೆಸಲು ಹಲವಾರು ಬಾರಿ ಸಂಚು ನಡೆಸಲಾಗಿದೆ.. ಈಗಾಗಲೇ ಹಲವು ಬಾರಿ ಈ ಸಂಚಿನಲ್ಲಿ ವಿಫಲವಾಗಿರುವ ದುಷ್ಕರ್ಮಿಗಳು, ಮತ್ತೊಮ್ಮೆ ನಿರಾಶರಾಗಿದ್ದಾರೆ.. ಲೋಕೋಪೈಲಟ್‌ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ..
ರೈಲು ಹಳ್ಳಿಯ ಮೇಲೆ ದುಷ್ಕರ್ಮಿಗಳು ಮಣ್ಣಿನ ರಾಶಿ ಹಾಕಿದ್ದರು.. ಇದಕ್ಕೆ ಗುದ್ದಿ ರೈಲು ಹಳಿ ತಪ್ಪಿ ದುರಂತ ನಡೆಯುತ್ತದೆ ಎಂದು ದುಷ್ಕರ್ಮಿಗಳು ಪ್ಲ್ಯಾನ್‌ ಮಾಡಿದ್ದರು.. ಆದ್ರೆ ಲೋಕೋಪೈಲಟ್‌ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದೆ.. ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.. ನಿನ್ನೆ ಸಂಜೆ ರಘುರಾಜ್ ಸಿಂಗ್ ಶಟಲ್ ರೈಲಿಗೆ ಅಡ್ಡಲಾಗಿ ಮಣ್ಣು ಹಾಕಲಾಗಿತ್ತು..
ಮೇಲ್ನೋಟಕ್ಕೆ ಇದು ದುಷ್ಕರ್ಮಿಗಳ ಕೆಲಸ ಎಂದು ಹೇಳಲಾಗಿತ್ತು.. ಆದ್ರೆ ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ಮಣ್ಣು ತುಂಬುವ ಕೆಲಸದಲ್ಲಿ ತೊಡಗಿದ್ದ ಡಂಪರ್ ರಾತ್ರಿಯಾಗಿದ್ದರಿಂದ ಮಣ್ಣನ್ನು ರೈಲು ಹಳಿಯ ಮೇಲೆಯೇ ಡಂಪ್‌ ಮಾಡಿ ಹೋಗಿದ್ದಾನೆ ಎನ್ನಲಾಗುತ್ತಿದೆ.. ಈ ಬಗ್ಗೆ ತನಿಖೆ ನಡೆಯುತ್ತಿದೆ..

Share Post