BengaluruCrime

20 ರೂಪಾಯಿಗಾಗಿ ಕಿರಿಕ್‌!; ಬಾರ್‌ ಕ್ಯಾಷಿಯರ್‌ಗೆ ಚಾಕು ಇರಿತ!

ಬೆಂಗಳೂರು; 20 ರೂಪಾಯಿಗಾಗಿ ಕಿರಿಕ್‌ ಮಾಡಿಕೊಂಡ ಕಿಡಿಗೇಡಿಗಳು ಬಾರ್‌ ಕ್ಯಾಶಿಯರ್‌ಗೆ ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.. ಬೆಂಗಳೂರಿನ ವಿದ್ಯಾರಣ್ಯಪುರದ ಬಳಿಯ ನರಸೀಪುರದಲ್ಲಿರುವ ಜಯಶ್ರೀ ಬಾರ್‌ನಲ್ಲಿ ಈ ಘಟನೆ ನಡೆದಿದೆ..
ಚೇತನ್‌, ಕಾರ್ತೀಕ್‌ ಹಾಗೂ ಮತ್ತೊಬ್ಬ ವ್ಯಕ್ತಿ ಈ ಕೃತ್ಯ ಎಸಗಿದ್ದಾರೆ.. ಚೇತನ್‌ ಹಾಗೂ ಕಾರ್ತೀಕ್‌ನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.. ಮತ್ತೊಬ್ಬ ಪರಾರಿಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.. ಬಾರ್‌ ಕ್ಯಾಶಿಯರ್‌ 20 ರೂಪಾಯಿ ಹೆಚ್ಚು ಬಿಲ್‌ ಮಾಡಿದ್ದಾನೆ ಎಂದು ಕ್ಯಾತೆ ತೆಗೆಯಲಾಗಿದೆ.. ಈ ಜಗಳ ತಾರಕಕ್ಕೇರಿದ್ದು, ಕಿಡಿಗೇಡಿಗಳು ಚಾಕು ಹಾಗೂ ಬಾಟಲ್‌ನಿಂದ ಕ್ಯಾಶಿಯರ್‌ ರಂಜಿತ್‌ ಮೇಲೆ ಹಲ್ಲೆ ಮಾಡಿದ್ದಾರೆ..
ಈ ಬಗ್ಗೆ ವಿದ್ಯಾರಣ್ಯಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಇಬ್ಬರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ.. ಇನ್ನೊಬ್ಬ ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ..

Share Post