CrimeDistricts

ಮಂಡ್ಯ ಬಳಿ ಸರ್ಕಾರಿ ಬಸ್‌ ಭೀಕರ ಅಪಘಾತ!; 20 ಮಂದಿ ಸ್ಥಿತಿ ಗಂಭೀರ!

ಮಂಡ್ಯ; ಮಂಡ್ಯ ಬಳಿ ಭೀಕರ ಅಪಘಾತ ಸಂಭವಿಸಿದೆ.. ಬೆಂಗಳೂರು-ಮೈಸೂರು ಹೆದ್ದಾರಿಯಿಂದ ಸರ್ವೀಸ್‌ ರಸ್ತೆಗೆ ತಿರುವು ಪಡೆಯುವಾಗ ಸರ್ಕಾರಿ ಬಸ್‌ ಕಂಟೈನರ್‌ಗೆ ಡಿಕ್ಕಿ ಹೊಡೆದಿದೆ.. ಇದರಿಂದಾಗಿ ಬಸ್‌ ಪಲ್ಟಿಯಾಗಿದ್ದು, 20 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.. ಎಲ್ಲರ ಸ್ಥಿತಿ ವಿಷಮವಾಗಿದೆ ಎಂದು ಹೇಳಲಾಗುತ್ತಿದೆ..
ಮಂಡ್ಯದ ಸಾಂಜೋ ಆಸ್ಪತ್ರೆ ಬಳಿ ಈ ಘಟನೆ ನಡೆದಿದೆ.. ಕೆಎಸ್‌ಆರ್‌ಟಿಸಿ ಬಸ್‌ ಬೆಂಗಳೂರಿಗೆ ಮೈಸೂರಿಗೆ ಹೋಗುತ್ತಿತ್ತು.. ರಾಷ್ಟ್ರೀಯ ಹೆದ್ದಾರಿಯಿಂದ ಮಂಡ್ಯ ಕಡೆಗೆ ಸರ್ವೀಸ್‌ ರಸ್ತೆಗೆ ತಿರುಗಿಕೊಳ್ಳುವಾಗ ಬಸ್‌ ಚಾಲಕನ ನಿಯಂತ್ರಣ ತಪ್ಪಿದೆ.. ಇದರಿಂದಾಗಿ ಕಂಟೈನರ್‌ಗೆ ಡಿಕ್ಕಿ ಹೊಡೆದಿದ್ದು, ನಂತರ ಪಲ್ಟಿಯಾಗಿದೆ..
ಗಾಯಾಳುಗಳನ್ನು ಮಂಡ್ಯದ ಮಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.. ಮಂಡ್ಯ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ..

Share Post