CrimeNational

ಮನೆ ಮುಂದೆ ಆಟವಾಡುತ್ತಿದ್ದ ಮಗುವನ್ನು ಎಳೆದೊಯ್ದ ಚಿರತೆ!

ಉತ್ತರಾಖಂಡ್‌; ಮನೆ ಮುಂದೆ ಆಟವಾಡುತ್ತಿದ್ದ ಮೂರು ವರ್ಷ ಬಾಲಕನನ್ನು ಎಳೆದೊಯ್ದ ಚಿರತೆ, ಪೊದೆಯಲ್ಲಿ ಆತನನ್ನು ಕೊಂದು ತಿಂದಿದೆ.. ಉತ್ತರಾಖಂಡ್‌ನ ತೆಹ್ರಿ ಅರಣ್ಯ ವಿಭಾಗದ ಭಿಲಾಂಗನಾ ರೇಂಜ್‌ನ ಪುರ್ವಾಲ್‌ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ..
ಹತ್ತಿರದಲ್ಲಿ ಕಾಡಿದ್ದು, ಕಾಡಿನಿಂದ ಚಿರತೆ ಬಂದು ಮಗುವನ್ನು ಎಳೆದೊಯ್ದಿದೆ ಎಂದು ತಿಳಿದುಬಂದಿದೆ.. ಮಗು ಮನೆಯ ಮುಂದೆ ಆಟವಾಡುತ್ತಾ ಕುಳಿತಿತ್ತು.. ತಾಯಿ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು.. ಈ ವೇಳೆ ಬಂದಿರುವ ಚಿರತೆ ಮಗುವಿನ ಕತ್ತು ಕಚ್ಚಿಕೊಂಡು ಹೋಗಿದೆ.. ಹತ್ತಿರದ ಪೊದೆಯೊಂದರಲ್ಲಿ ಮಗುವಿನ ಅರ್ಧಂಬರ್ಧ ದೇಹ ಪತ್ತೆಯಾಗಿದೆ..
ಅಂಕಿತ್ ಕುಮಾರ್ ಅವರ ಮಗ ರಾಜ್ ಕುಮಾರ್ ಚಿರತೆ ದಾಳಿಗೆ ಬಲಿಯಾದ ಮಗು.. ರಾಜ್‌ಕುಮಾರ್‌ ತನ್ನ ತಾಯಿಯ ಚಿಕ್ಕಪ್ಪನ ಮಕ್ಕಳ ಜೊತೆ ಆಟವಾಡುತ್ತಿದ್ದ.. ಈ ವೇಳೆ ಈ ಘಟನೆ ನಡೆದಿದೆ..

Share Post