BengaluruCrime

ಮಹಾಲಕ್ಷ್ಮೀ ಕೊಲೆ ಆರೋಪಿ ಮುಕ್ತಿ ರಂಜನ್‌ ಆತ್ಮಹತ್ಯೆ!

ಬೆಂಗಳೂರು; ವೈಯಾಲಿಕಾವಲ್‌ನಲ್ಲಿ ಮಹಾಲಕ್ಷ್ಮೀಯನ್ನು ಹತ್ಯೆ ಮಾಡಿದ್ದ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.. ಪೊಲೀಸರು ಕಳೆದ ನಾಲ್ಕು ದಿನಗಳಿಂದ ಆತನಿಗಾಗಿ ಹುಡುಕಾಟ ನಡೆಸುತ್ತಿದ್ದರು.. ಆದ್ರೆ ಇಂದು ಆತ ಒಡಿಶಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಗೊತ್ತಾಗಿದೆ..
ಮುಕ್ತಿರಂಜನ್‌ ಒಡಿಶಾ ಮೂಲದವನಾಗಿದ್ದು, ಬೆಂಗಳೂರಿನ ಮಳಿಗೆಯೊಂದರಲ್ಲಿ ಟೀಮ್‌ ಲೀಡ್‌ ಮಾಡುತ್ತಿದ್ದ ಎನ್ನಲಾಗಿದೆ.. ಮಹಾಲಕ್ಷ್ಮೀ ಕೂಡಾ ಈತನ ಕೆಳಗೆ ಕೆಲಸ ಮಾಡುತ್ತಿದ್ದಳು.. ಗಂಡನನ್ನು ಬಿಟ್ಟು ಬಂದಿದ್ದ ಮಹಾಲಕ್ಷ್ಮೀ ಈ ಮುಕ್ತಿರಂಜನ್‌ ಜತೆ ಸಲುಗೆಯಿಂದ ಇದ್ದಳು ಎನ್ನಲಾಗಿದೆ..
ವೈಯಾಲಿಕಾವಲ್‌ನ ಮನೆಯಲ್ಲಿ ಮಹಾಲಕ್ಷ್ಮೀಯನ್ನು ಕೊಂದು 59 ತುಂಡುಗಳಾಗಿ ಕತ್ತರಿಸಿ ದೇಹವನ್ನು ಫ್ರಿಡ್ಜ್‌ನಲ್ಲಿಟ್ಟಿದ್ದ ಆರೋಪಿ ಅಲ್ಲಿಂದ ಎಸ್ಕೇಪ್‌ ಆಗಿದ್ದ.. ಸೆಪ್ಟೆಂಬರ್‌ 2ರಂದೇ ಈ ಕೊಲೆ ನಡೆದಿದ್ದು, ಸೆಪ್ಟೆಂಬರ್‌ 22 ರಂದು ಪ್ರಕರಣ ಬೆಳಕಿಗೆ ಬಂದಿತ್ತು.. ಮುಕ್ತಿರಂಜನ್‌ ನಾಪತ್ತೆಯಾಗಿದ್ದ.. ಆತನ ಮೊಬೈಲ್‌ ಲೊಕೇಶನ್‌ ಪಶ್ಚಿ ಬಂಗಾಳದಲ್ಲಿ ಪತ್ತೆಯಾಗಿತ್ತು.. ಅನಂತರ ಆತ ಸ್ವಿಚ್ಡ್‌ ಆಫ್‌ ಮಾಡಿಕೊಂಡಿದ್ದ.. ಅಂದಿನಿಂದ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದರು..

 

Share Post