CrimeNational

ಉದ್ಯಮಿ ವಿನಾಯಕ್‌ ಹತ್ಯೆ ಪ್ರಕರಣ; ಸುಪಾರಿ ಕೊಟ್ಟಿದ್ದ ಉದ್ಯಮಿ ಆತ್ಮಹತ್ಯೆ!

ಕಾರವಾರ; ಇತ್ತೀಚೆಗೆ ಕಾರವಾರದ ಹಣಕೋಣದಲ್ಲಿ ಉದ್ಯಮಿ ವಿನಾಯಕ ನಾಯ್ಕ್‌ ಹತ್ಯೆಯಾಗಿತ್ತು.. ಕೇರಳದಲ್ಲಿ ಉದ್ಯಮಿಯಾಗಿರುವ ವಿನಾಯಕ್‌ ನಾಯ್ಕ್‌ ಪಿತೃಪಕ್ಷ ಮಾಡಲೆಂದು ಕಾರವಾರದ ಮನೆಗೆ ಬಂದಿದ್ದರು.. ಈ ವೇಳೆ ದಾಳಿ ಮಾಡಿದ್ದ ದುಷ್ಕರ್ಮಿಗಳು ವಿನಾಯಕ ನಾಯ್ಕ್‌ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದರು.. ಈ ಕೊಲೆಗೆ ಮತ್ತೊಬ್ಬ ಉದ್ಯಮಿ ಗುರುಪ್ರಸಾದ್‌ ರಾಣೆ ಸುಪಾರಿ ಕೊಟ್ಟಿದ್ದರು ಎಂಬ ಮಾಹಿತಿ ಪೊಲೀಸರಿಗೆ ಗೊತ್ತಾಗಿತ್ತು.. ಈ ಹಿನ್ನೆಲೆಯಲ್ಲಿ ಬಂಧನದ ಭೀತಿಯಿಂದ ಸುಪಾರಿ ಕೊಟ್ಟಿದ್ದರು ಎನ್ನಲಾದ ಉದ್ಯಮಿ ಗರುಪ್ರಸಾದ್‌ ರಾಣೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ..
ಸೆಪ್ಟೆಂಬರ್‌ 22ರಂದು ಬೆಳಗ್ಗೆ 5.30ರ ಸುಮಾರಿಗೆ ಕಾರವಾರದ ಹಣಕೋಣದ ಮನೆಗೆ ದಾಳಿ ಮಾಡಿದ ದುಷ್ಕರ್ಮಿಗಳು ವಿನಾಯಕ್‌ ನಾಯ್ಕ್‌ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆ ಮಾಡಿದ್ದರು.. ಅಡ್ಡ ಬಂದ ಅವರ ಪತ್ನಿ ಮೇಲೂ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದರು.. ನಿನ್ನೆಯಷ್ಟೇ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.. ಅವರು ಪೊಲೀಸರ ವಿಚಾರಣೆ ವೇಳೆ ಉದ್ಯಮಿ ಗುರುಪ್ರಸಾದ್‌ ಸುಪಾರಿ ಕೊಟ್ಟಿದ್ದರು ಎಂದು ಬಾಯ್ಬಿಟ್ಟಿದ್ದಾರೆ.. ಇದರಿಂದಾಗಿ ಪೊಲೀಸರು ಉದ್ಯಮಿ ಗುರುಪ್ರಸಾದ್‌ ಗಾಗಿ ಮುಂಬೈ, ದೆಹಲಿ ಮುಂತಾದ ಕಡೆ ಹುಡುಕಾಟ ನಡೆಸಿದ್ದರು.. ಈ ನಡುವೆ ಗೋವಾದ ಮಾಂಡೋವಿ ನದಿಯಲ್ಲಿ ಮೃತ ದೇಹ ತೇಲುತ್ತಿದ್ದುದು ಕಂಡುಬಂದಿದೆ.. ಅದು ಉದ್ಯಮಿ ವಿನಾಯಕ್‌ ನಾಯ್ಕ್‌ ಅವರದ್ದೇ ಎಂಬುದು ಗೊತ್ತಾಗಿದೆ..
ಬಂದಿತ ಆರೋಪಿಗಳಲ್ಲಿ ಇಬ್ಬರು ಬಿಹಾರಿಗಳಾಗಿದ್ದು, ಮತ್ತೊಬ್ಬ ಗುರುಪ್ರಸಾದ್‌ ಸ್ನೇಹಿತ ಎಂದು ತಿಳಿದುಬಂದಿದೆ.. ಚಿತ್ತಾಕುಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ..

Share Post