BengaluruCrime

ನೇಪಾಳ ಮೂಲದ ಮಹಾಲಕ್ಷ್ಮೀ ಕೊಲೆಯಾಗಿದ್ದೇಕೆ..?

ಬೆಂಗಳೂರು; ದೆಹಲಿ ಶ್ರದ್ಧಾ ಕೊಲೆ ಪ್ರಕರಣ ಮೀರಿಸುವ ಕೊಲೆ ಬೆಂಗಳೂರಿನಲ್ಲಿ ನಡೆದಿದೆ.. ವಿವಾಹಿತ ಮಹಿಳೆಯನ್ನು ಕೊಲೆ ಮಾಡಿ, 30 ಪೀಸ್‌ ಮಾಡಿ, ಫ್ರಿಡ್ಜ್‌ನಲ್ಲಿ ಜೋಡಿಸಿಟ್ಟಿದ್ದ ಘಟನೆ ಬೆಳಕಿಗೆ ಬಂದಿದೆ.. ವೈಯ್ಯಾಲಿಕಾವಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಮುನೇಶ್ವರ ಬ್ಲಾಕ್‌ನಲ್ಲಿ ಈ ಘಟನೆ ನಡೆದಿದ್ದು, ಹತ್ಯೆಯಾದ ಮಹಿಳೆಯ ಹೆಸರು ಮಹಾಲಕ್ಷ್ಮೀ ಎಂದು ಗುರುತಿಸಲಾಗಿದ್ದು, ನೇಪಾಳ ಮೂಲದವರು ಎಂದು ತಿಳಿದುಬಂದಿದೆ.. 26 ವರ್ಷದ ಮಹಾಲಕ್ಷ್ಮೀ ವಿಚ್ಛೇದಿತೆಯಾಗಿದ್ದು, ಸಿಂಗಲ್‌ ಬೆಡ್‌ ರೂಮ್‌ ಮನೆಯಲ್ಲಿ ವಾಸವಿದ್ದರು.. ಮನೆಯಿಂದ ವಾಸನೆ ಮಾಡುತ್ತಿದ್ದುದರಿಂದ ಅನುಮಾನಗೊಂಡ ಸ್ಥಳೀಐರು ಮಹಿಳೆಯ ಸಂಬಂಧಿಕರಿಗೆ ಮಾಹಿತಿ ನೀಡಿದ್ದರು.. ಸಂಬಂಧಿಕರು ಬಂದು ನೋಡಿದಾಗ, ಫ್ರಿಡ್ಜ್‌ನಲ್ಲಿ ಮಹಿಳೆಯ ದೇಹ ತುಂಡು ತುಂಡಾಗಿತ್ತು.. ಹುಳಗಳು ಹೊರಬರುತ್ತಿದ್ದವು..
ಮಹಾಲಕ್ಷ್ಮೀ ಅವರು ನೇಪಾಳ ಮೂಲದ ಮಹಾಲಕ್ಷ್ಮೀ ಅವರು ನೆಲಮಂಗಲದಲ್ಲಿ ವಾಸವಿರುವ ಹುಕುಂ ಸಿಂಗ್‌ ಎಂಬುವವರನ್ನು ಮದುವೆಯಾಗಿದ್ದಳು.. ಇವರಿಗೆ ಒಂದು ಮಗು ಕೂಡಾ ಇದೆ.. ಆದ್ರೆ ಪತಿಯಿಂದ ಡಿವೋರ್ಸ್‌ ಪಡೆದ ಈಕೆ, ವೈಯಾಲಿಕಾವಲ್‌ನಲ್ಲಿ ಒಬ್ಬಳೇ ವಾಸವಿದ್ದಳು.. ಒಬ್ಬ ವ್ಯಕ್ತಿ ಈಕೆಯನ್ನು ಪಿಕಪ್‌ ಡ್ರಾಪ್‌ ಮಾಡುತ್ತಿದ್ದ ಎನ್ನಲಾಗಿದೆ.. ಮಹಾಲಕ್ಷ್ಮೀ ಮಂತ್ರಿಮಾಲ್‌ನ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ..
ಮಗು ಮಾಜಿ ಗಂಡನ ಜೊತೆಯಲ್ಲೇ ಇದೆ.. ಮಹಾಲಕ್ಷ್ಮೀ ಸೆಪ್ಟೆಂಬರ್‌ 2ರಿಂದ ಯಾರ ಫೋನ್‌ಗೂ ಉತ್ತರಿಸಿಲ್ಲ.. ಹೀಗಾಗಿ ಅಂದೇ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.. ಸ್ಥಳಕ್ಕೆ FSL ಹಾಗೂ ವೈದ್ಯಾಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Share Post