BengaluruPolitics

ಸಚಿವರ ಬಾರ್ ರಾತ್ರಿ ಇಡೀ ತೆರೆಯಬಹುದೇ?; ಜೆಡಿಎಸ್ ಪ್ರಶ್ನೆ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಂಧಾ ದರ್ಬಾರ್ ಜೋರಾಗಿಯೇ ನಡೆಯುತ್ತಿದೆ ಎಂದು ಜೆಡಿಎಸ್ ಆರೋಪ ಮಾಡಿದೆ. ಹೇಳುವವರು, ಇಲ್ಲ ಕೇಳುವವರು ಯಾರು ಇಲ್ಲದಂತಾಗಿದೆ ಎಂದು ಜೆಡಿಎಸ್‌  ಎಕ್ಸ್ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.

ಬೆಂಗಳೂರಿನಲ್ಲಿ ಪಬ್, ಬಾರ್ ಮತ್ತು ರೆಸ್ಟೋರೆಂಟ್ ಗಳನ್ನು ತೆರೆಯಲು ರಾತ್ರಿ ಒಂದು ಗಂಟೆವರೆಗೂ ಮಾತ್ರ ಅವಕಾಶ ನೀಡಲಾಗಿದೆ.. ಆದ್ರೆ ಸಚಿವರೊಬ್ಬರ ಬಾರ್ ರಾತ್ರಿಯಿಡಿ ನಡೆಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಜೆಡಿಎಸ್ ಟ್ವೀಟ್ ನಲ್ಲಿ ಏನಿದೆ?

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅಂಧ ದರ್ಬಾರ್ ಜೋರಾಗಿದೆ ! ಮುಂದಿನ ಮುಖ್ಯಮಂತ್ರಿ ಎಂದು ಹಗಲುಗನಸು ಕಾಣುತ್ತಿರುವ ಸಚಿವರೊಬ್ಬರ ಒಡೆತನದ “ಮಿರಾಜ್ ಪಬ್” ನಿಯಮ ಮೀರಿ ನಡೆಸಲಾಗುತ್ತಿದೆ. ಬೆಂಗಳೂರಿನಲ್ಲಿ ಪಬ್, ಬಾರ್ ಮತ್ತು ರೆಸ್ಟೋರೆಂಟ್ ಗಳನ್ನು ತೆರೆಯಲು ರಾತ್ರಿ ಒಂದು ಗಂಟೆವರೆಗೂ ಮಾತ್ರ ಅವಕಾಶ ನೀಡಲಾಗಿದೆ.. ಆದರೆ ರಾತ್ರಿ ಒಂದು ಗಂಟೆಯಾದರೂ ಬಂದ್ ಮಾಡದೇ “ಮಿರಾಜ್ ಪಬ್” ನಲ್ಲಿ ಡಿ.ಜೆ ಸೌಂಡ್ ಹಾಕಿ ಕಾನೂನು ಬಾಹಿರವಾಗಿ ನಡೆಸಲಾಗುತ್ತಿದೆ. ಈ ಬಗ್ಗೆ ಸ್ಥಳೀಯರು 09-09-2024ರಂದು ಮತ್ತು 16-09-2024ರಂದು ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದರೂ “ಮಿರಾಜ್ ಪಬ್” ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಬೆಂಗಳೂರು ಪೊಲೀಸರೇ ಆ ಪ್ರಭಾವಿ ಸಚಿವರ ಒತ್ತಡಕ್ಕೆ ಒಳಗಾಗಿ ಕಂಡು ಕಾಣದಂತೆ ಸುಮ್ಮನಿದ್ದೀರಾ..? ಕಾನೂನು, ಕಟ್ಟಳೆ, ನಿಯಮಗಳು ಕೇವಲ ಜನಸಮಾನ್ಯರಿಗಷ್ಟೇ ಸೀಮಿತವೇ..? ಕಾಂಗ್ರೆಸ್ ನಾಯಕರಿಗೆ ಅದು ಅನ್ವಯಿಸುವುದಿಲ್ಲವೇ..? @BlrCityPolice ನಿಮ್ಮನ್ನು ತಡೆದಿರುವ ಆ ಆದೇಶ ಯಾವುದು..?

Share Post