CinemaHealth

ಅಪಘಾತದಲ್ಲಿ ಕನ್ನಡ ನಟ ಕಿರಣ್ ರಾಜ್ ಗೆ ಗಂಭೀರ ಗಾಯ!

ಬೆಂಗಳೂರು; ಕನ್ನಡದ ಚಿತ್ರ ನಟ ಕಿರಣ್ ರಾಜ್ ಕಾರು ಅಪಘಾತಕ್ಕೆ ಈಡಾಗಿದೆ. ಘಟನೆಯಲ್ಲಿ ನಟ ಕಿರಣ್ ರಾಜ್ ಗಂಭೀರ ಗಾಯಗೊಂಡಿದ್ದಾರೆ..ಬೆಂಗಳೂರಿನ ಕೆಂಗೇರಿ ಉಪನಗರದ ಶಿರಸಿ ಸರ್ಕಲ್ ಬಳಿ ಈ ಅಪಘಾತ ನಡೆದಿದೆ. ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಈ ಘಟನೆ ನಡೆದಿದೆ.

  ನಟ ಕಿರಣ್ ರಾಜ್ ರಾನಿ ಎಂಬ ಚಿತ್ರದಲ್ಲಿ ನಟಿಸಿದ್ದು, ಭಾರಿ ನಿರೀಕ್ಷೆ ಮೂಡಿಸಿದೆ. ಕಿರಣ್ ಅವರು ಆಶ್ರಮ ವೊಂದಕ್ಕೆ ಭೇಟಿ ಕೊಟ್ಟು ವಾಪಾಸ್ ಬರುತ್ತಿದ್ದರು. ಈ ವೇಳೆ ಅಪಘಾತ ನಡೆದಿದೆ. ಕಿರಣ್ ರಾಜ್ ಎದೆ ಹಾಗೂ ತಲೆ ಭಾಗಕ್ಕೆ ಪೆಟ್ಟಾಗಿದೆ.. ಅವರನ್ನು ಕೇಗೇರಿ ಹತ್ತಿರದ ಬೆಂಗಳೂರು ಹಾಸ್ಪಿಟಲ್ ಗೆ ದಾಖಲಿಸಲಾಗಿದೆ.

  ಕಾರಿನಲ್ಲಿ ರಾನಿ ಸಿನಿಮಾ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಕೂಡಾ ಇದ್ದರು. ಅವರು ಸೀಟ್ ಬೆಲ್ಟ್ ಹಾಕಿದ್ದರಿಂದ ಬಚಾವಾಗಿದ್ದಾರೆ.. ರಾನಿ ಸಿನಿಮಾ ನಾಳೆ ಬಿಡುಗಡೆಯಗುತ್ತಿದೆ.

 

Share Post