HealthNational

ಕಾಳಿಂಗ ಸರ್ಪವನ್ನು ಬಾಯಿಗಿಟ್ಟುಕೊಂಡು ರೀಲ್ಸ್‌!; ಮುಂದೇನಾಯ್ತು..?

ಹೈದರಾಬಾದ್; ರೀಲ್ಸ್‌ ಮಾಡುವ ಹಾಗೂ ಜನರ ಗಮನ ಸೆಳೆಯುವ ಕಾರಣಕ್ಕೆ ಜನರು ಹುಚ್ಚು ಸಾಹಸಗಳನ್ನು ಮಾಡುತ್ತಾರೆ.. ಜೀವವನ್ನೂ ಪಣಕ್ಕಿಡುತ್ತಾರೆ.. ಅದೇ ರೀತಿ ತೆಲಂಗಾಣದಲ್ಲಿ ಯುವಕನೊಬ್ಬ ಹುಚ್ಚು ಸಾಹಸ ಮಾಡಿದ್ದಾನೆ.. ಹೆಡೆ ಎತ್ತಿದ್ದ ಕಾಳಿಂಗ ಸರ್ಪದ ಹೆಡೆಯನ್ನು ಯುವಕ ಬಾಯಿಗೆ ಇಟ್ಟುಕೊಂಡು ಕ್ಯಾಮರಾಗೆ ಫೋಸ್‌ ಕೊಟ್ಟಿದ್ದಾನೆ.. ಈ ವೇಳೆ ಹಾವು ಆತನನ್ನು ಕಚ್ಚಿದ್ದು, ಕೆಲವೇ ಕ್ಷಣಗಳಲ್ಲಿ ಆತ ಸಾವನ್ನಪ್ಪಿದ್ದಾನೆ..
ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.. 22 ವರ್ಷದ ಶಿವ ರಾಜುಲು ಎಂಬಾತನೇ ಸಾವನ್ನಪ್ಪಿದ ಯುವಕನಾಗಿದ್ದಾನೆ.. ಮೃತ ಶಿವನ ಅಪ್ಪ ಹಾವುಗಳನ್ನು ಹಿಡಿಯುವುದರಲ್ಲಿ ಎಕ್ಸ್‌ಪರ್ಟ್‌ ಆಗಿದ್ದಾನೆ.. ಅಪ್ಪನನ್ನು ನೋಡಿ ಶಿವ ಕೂಡಾ ಹಾವುಗಳನ್ನು ನಿಭಾಯಿಸಿವುದು, ಹಿಡಿಯುವುದನ್ನು ಕಲಿತಿದ್ದ.. ಶಿವನ ತಂದೆ ಕಾಳಿಂಗ ಸರ್ಪವೊಂದನ್ನು ಹಿಡಿದಿದ್ದು, ಅದರ ಆಟ ಆಡಿಸುತ್ತಾ ರೀಲ್ಸ್‌ ಮಾಡುವಂತೆ ಹೇಳಿದ್ದಾನೆ.. ತಂದೆಯ ಸೂಚನೆಯಂತೆ ಮಗ ಶಿವ ಕಾಳಿಂಗ ಸರ್ಪವನ್ನು ಕೈಯಲ್ಲಿ ಹಿಡಿದು ಆಟ ಆಡಿಸಿದ್ದಾರೆ.. ಅದು ಹೆಡೆ ಎತ್ತಿದ್ದಾಗ ಅದನ್ನು ಹಿಡಿದು ಬಾಯಿಗೆ ಇಟ್ಟುಕೊಂಡು ಪ್ರದರ್ಶನ ನೀಡಿದ್ದಾನೆ.. ಈ ವೇಳೆ ಹಾವು ಆತನನ್ನು ಕಚ್ಚಿದೆ..
ಹಾವು ಕಚ್ಚಿದ ಕೆಲವೇ ಕ್ಷಣಗಳಲ್ಲಿ ಶಿವ ಪ್ರಜ್ಞೆ ಕಳೆದುಕೊಂಡಿದ್ದಾನೆ.. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.. ಆದ್ರೆ ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ..

Share Post