NationalPolitics

ನಾವು ದೇವರಾ ಅನ್ನೋದು ಜನ ನಿರ್ಧರಿಸಬೇಕು; ಮೋದಿಗೆ ಭಾಗವತ್‌ ಟಾಂಗ್‌?

ಪುಣೆ; ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಪ್ರಧಾನಿ ಮೋದಿಯವರಿಗೆ ಪರೋಕ್ಷವಾಗಿ ಟಾಂಗ್‌ ಕೊಟ್ಟಿದ್ದಾರೆ.. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಭಾಷಣವೊಂದರಲ್ಲಿ ನಾನು ಜೈವಿಕವಾಗಿ ಜನಿಸಿದಂತೆ ಭಾಸವಾಗುತ್ತಿಲ್ಲ, ನನ್ನನ್ನು ಭಗವಂತ ಕಳುಹಿಸಿದ್ದಾನೆ ಎಂಬರ್ಥದಲ್ಲಿ ಹೇಳಿದ್ದರು.. ಇದಕ್ಕೆ ಆಗಲೇ ಮೋಹನ್‌ ಭಾಗವತ್‌ ಟಾಂಗ್‌ ಕೊಟ್ಟ ರೀತಿಯಲ್ಲಿ ಮಾತನಾಡಿದ್ದರು.. ಇದೀಗ ಮತ್ತೆ ಈ ಬಗ್ಗೆ ಪ್ರತಿಕ್ರಿಯಿಸುವ ರೀತಿಯಲ್ಲೇ ಮಾತನಾಡಿದ್ದಾರೆ..
ನಾವು ದೇವರಾಗಬೇಕೋ, ಬೇಡವೋ ಎಂಬುದನ್ನು ಜನ ನಿರ್ಧಾರ ಮಾಡುತ್ತಾರೆ. ನಾವೇ ದೇವರಾಗಿದ್ದಾರೆ ಎಂದು ಘೋಷಣೆ ಮಾಡಿಕೊಳ್ಳಬಾರದು ಎಂದು ಮೋಹನ್‌ ಭಾಗವತ್‌ ಹೇಳಿದ್ದಾರೆ.. ಈ ಹಿಂದೆ ಮಾತನಾಡಿದ್ದ ಮೋಹನ್‌ ಭಾಗವತ್‌, ಯಾವುದೇ ವ್ಯಕ್ತಿ ದೇವತೆ, ಭಗವಾನ್‌ ಆಗಲು ಬಯಸಬಹುದು. ಆದ್ರೆ ಮುಂದೆ ಏನಾಗುತ್ತೆ ಎಂಬ ಅರಿವೂ ಅವರಿಗಿರೋದಿಲ್ಲ ಎಂದಿದ್ದರು.. ಇದೀಗ ಮತ್ತೆ ಅವರು ಇಂತಹದೇ ಹೇಳಿಕೆ ನೀಡಿ ಚರ್ಚೆಗೆ ಕಾರಣರಾಗಿದ್ದಾರೆ..
ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೋಹನ್‌ ಭಾಗವತ್‌,‘ಕೆಲವರು ಮಿಂಚಿನಂತೆ ಹೊಳೆಯಬೇಕು ಅಂದುಕೊಳ್ತಾರೆ. ಆದರೆ ಗುಡುಗು-ಸಿಡಿಲಿನ ಬಳಿಕ ಮೊದಲಿಗಿಂತ ಹೆಚ್ಚು ಕತ್ತಲೆಯಾದಂತೆ ಕಾಣುತ್ತದೆ ಎಂದಿದ್ದಾರೆ.

Share Post