CrimeNational

ಮದುವೆ ನಿಶ್ಚಯವಾಗಿದ್ದ ಯುವತಿ ಮೇಲೆ ಅತ್ಯಾಚಾರ!

ಗಾಜಿಯಾಬಾದ್‌; ಅವರಿಬ್ಬರಿಗೂ ಮದುವೆ ನಿಶ್ಚಯವಾಗಿತ್ತು.. ಇನ್ನೊಂದು ತಿಂಗಳಲ್ಲಿ ಮದುವೆಯೂ ಇತ್ತು.. ಆದ್ರೆ ಅಷ್ಟರಲ್ಲಾಗಲೇ ಮದುಮಗನಿಗೆ ಮದುವೆಯಾಗುವ ಆಸೆ ಹೋಗಿತ್ತು.. ಆಕೆಯನ್ನು ಹೇಗಾದರೂ ಮಾಡಿ ದೈಹಿಕವಾಗಿ ಬಳಸಿಕೊಂಡು ಮದುವೆಯಾಗದೇ ಬಿಟ್ಟುಬಿಡೋಣ ಎಂದು ಯೋಚನೆ ಮಾಡಿದ್ದ.. ಅದಕ್ಕಾಗಿ ಆತ ಟ್ರಿಪ್‌ ಪ್ಲ್ಯಾನ್‌ ಮಾಡಿ, ಹೋಟೆಲ್‌ವೊಂದರಲ್ಲಿ ಅತ್ಯಾಚಾರ ಎಸಗಿದ್ದಾನೆ.. ಸಾಲದೆಂಬಂತೆ ಸ್ನೇಹಿತರಿಂದಲೂ ಲೈಂಗಿಕ ಕಿರುಕುಳ ಕೊಡಿಸಿದ್ದಾನೆ..

ಇದನ್ನೂ ಓದಿ; ಆಸ್ಪತ್ರೆಯಲ್ಲಿದ್ದ ಮಗನ ಬದುಕಿಸಲು ಮಹಿಳೆಯನ್ನು ಕೊಂದು ಹಣ ತಂದ ಅಪ್ಪ!

ಗಾಜಿಯಾಬಾದ್‌ನಲ್ಲಿ ಈ ಘಟನೆ ನಡೆದಿದೆ.. ಅಂಶು ಚೌಧರಿ ಎಂಬ ಯುವಕನೇ ಈ ಕೃತ್ಯ ಎಸಗಿರುವಾತ.. ಈತನಿಗೆ ಹುಡುಗಿಯೊಬ್ಬಳ ಜೊತೆ ನಿಶ್ಚಿತಾರ್ಥವಾಗಿತ್ತು.. ಇನ್ನೊಂದು ತಿಂಗಳಲ್ಲಿ ಮದುವೆಯೂ ಇತ್ತು.. ಆದ್ರೆ ಯಾಕೋ ಆತನಿಗೆ ಹುಡುಗಿ ಬೇಡವೆನಿಸಿದ್ದಾಳೆ.. ಸುಮ್ಮನೆ ಯಾಕೆ ಬೇಡ ಅನ್ನೋದು, ಆಕೆಯನ್ನು ದೈಹಿಕವಾಗಿ ಬಳಸಿಕೊಂಡು ಬಿಟ್ಟುಬಿಡೋಣ ಆತ ನಿರ್ಧರಿಸಿದ್ದಾರೆ.. ನಂತರ ಆಕೆಗೆ ಕರೆ ಮಾಡಿ ರಿಷಿಕೇಶಕ್ಕೆ ಹೋಗೋಣವೇ ಎಂದು ಕೇಳಿದ್ದಾನೆ.. ಅದಕ್ಕೆ ಆಕೆ ಒಪ್ಪಿದ್ದಾರೆ.. ರಿಷಿಕೇಶಕ್ಕೆ ಕರೆದುಕೊಂಡು ಹೋದ ಆಸಾಮಿ, ಹೋಟೆಲ್‌ ಒಂದರಲ್ಲಿ ಆಕೆಯ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ.. ಜೊತೆಗೆ ವಿಕೃತವಾಗಿ ಮೈಮೇಲೆಲ್ಲಾ ಕಚ್ಚಿದ್ದಾನೆ..

ಇದನ್ನೂ ಓದಿ; ಐ ಲವ್‌ ಯು ಹೇಳಿದ್ರೆ ಮಾತ್ರ ರೀಚಾರ್ಜ್‌ ಮಾಡ್ತಾನಂತೆ ಇವನು!; ಬಿತ್ತು ನೋಡಿ ಗೂಸಾ!

ನಂತರ ವಾಪಸ್‌ ಗಾಜಿಯಾಬಾದ್‌ಗೆ ಬರುವಾಗ ಆತನಿಗೆ ಮೂವರು ಸ್ನೇಹಿತರು ಜೊತೆಯಾಗಿದ್ದಾರೆ.. ಅವರೂ ಕೂಡಾ ಆ ಹುಡುಗಿಗೆ ಕಿರುಕುಳ ಕೊಟ್ಟಿದ್ದಾನೆ.. ಅನಂತರ ಪೆಟ್ರೋಲ್‌ ಬಂಕ್‌ ಒಂದರ ಬಳಿ ಆಕೆಯನ್ನು ಬಿಟ್ಟು ಪರಾರಿಯಾಗಿದ್ದಾನೆ.. ಅನಾಥವಾಗಿ ಕಣ್ಣೀರು ಹಾಕುತ್ತಿದ್ದ ಯುವತಿಯನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಅಂಶು ಹಾಗೂ ಆತನ ಮೂವರು ಸ್ನೇಹಿತರನ್ನು ಬಂಧಿಸಿದ್ದಾರೆ..

Share Post