CrimeNational

ಆಸ್ಪತ್ರೆಯಲ್ಲಿದ್ದ ಮಗನ ಬದುಕಿಸಲು ಮಹಿಳೆಯನ್ನು ಕೊಂದು ಹಣ ತಂದ ಅಪ್ಪ!

ಅಹ್ಮದಾಬಾದ್; ಮಕ್ಕಳಿಗಾಗಿ ಹೆತ್ತವರು ಪ್ರಾಣವನ್ನೇ ಪಣಕ್ಕಿಡುತ್ತಾರೆ ಅನ್ನೋದಕ್ಕೆ ಈ ಘಟನೆಯೇ ಉದಾಹರಣೆ.. ಇಲ್ಲಿ ಮಗ ತೀವ್ರ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆ ಸೇರಿದ್ದ.. ಆದ್ರೆ ಚಿಕಿತ್ಸೆ ಕೊಡೋಸೋದಕ್ಕೆ ಬಡವನಾದ ತಂದೆಯ ಬಳಿ ಹಣವಿರಲಿಲ್ಲ.. ಆದ್ರೆ ಮಗನನ್ನು ಹೇಗಾದರೂ ಬದುಕಿಸಿಕೊಳ್ಳಬೇಕೆಂದು ನಿರ್ಧರಿಸಿದ ತಂದೆ ಕಳ್ಳತನ ಮಾಡಿ ದುಡ್ಡು ತರಲು ತೀರ್ಮಾನಿಸಿದ್ದಾರೆ.. ಆದ್ರೆ ಈ ವೇಳೆ ಸಿಕ್ಕಿಹಾಕಿಕೊಳ್ಳುತ್ತೇನೆಂಬ ಭೀತಿಯಲ್ಲಿ ಮಹಿಳೆಯೊಬ್ಬರನ್ನು ಕೊಂದಿದ್ದಾರೆ.. ಈ ಘಟನೆ ನಡೆದಿರೋದು ಗುಜರಾತ್‌ನ ಪಠಾಣ್‌ ಜಿಲ್ಲೆಯ ಲುಖಾಸನ ಎಂಬ ಗ್ರಾಮದಲ್ಲಿ..

ಇದನ್ನೂ ಓದಿ; ಐ ಲವ್‌ ಯು ಹೇಳಿದ್ರೆ ಮಾತ್ರ ರೀಚಾರ್ಜ್‌ ಮಾಡ್ತಾನಂತೆ ಇವನು!; ಬಿತ್ತು ನೋಡಿ ಗೂಸಾ!

ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ಮಹಿಳೆಯ ಶವ ಪತ್ತೆಯಾಗಿತ್ತು.. ಆಕೆ ದೇವಸ್ಥಾನವೊಂದರ ಬಳಿ ಹೂವು ಮಾರುವ ಮಹಿಳೆಯಾಗಿದ್ದಳು.. ಆ ಮಹಿಳೆಯನ್ನು ಯಾರು ಕೊಂದರು ಎಂಬುದರ ಬಗ್ಗೆ ಪೊಲೀಸರು ತಲೆ ಕೆಡಿಸಿಕೊಂಡಿದ್ದರು.. ಸೂಕ್ತ ಸಾಕ್ಷಾಧಾರವೇ ಪೊಲೀಸರಿಗೆ ಸಿಗಲಿಲ್ಲ.. ಹೀಗಾಗಿ ಪೊಲೀಸರು ಅನುಮಾನದ ಮೇರೆಗೆ ಬರೋಬ್ಬರಿ 800 ಮಂದಿಯನ್ನು ವಿಚಾರಣೆ ಮಾಡಿದ್ದರು.. ಕೊನೆಗೆ ಕಲ್ಪೇಶ್‌ ಎಂಬ ವ್ಯಕ್ತಿಯ ಬಗ್ಗೆ ಪೊಲೀಸರಿಗೆ ಸಣ್ಣದೊಂದು ಕ್ಯ್ಲೂ ಸಿಕ್ಕಿದೆ.. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಿಜ ವಿಷಯ ಬಯಲಾಗಿದೆ..
ನನ್ನ ಮಗ ಅನಾರೋಗ್ಯದಿಂದ ತೀವ್ರ ಅಸ್ವಸ್ಥನಾಗಿದ್ದ.. ಸರ್ಕಾರಿ ಆಸ್ಪತ್ರೆಯಲ್ಲಿ ಆಗೋದಿಲ್ಲ ಎಂದರು.. ಎಲ್ಲರೂ ಖಾಸಗಿ ಆಸ್ಪತ್ರೆಗೆ ಸೇರಿಸುವಂತೆ ಹೇಳಿದರು.. ಮಗನನ್ನು ಬದುಕಿಸಬೇಕಿತ್ತು.. ಹೀಗಾಗಿ ಕಳ್ಳತನ ಮಾಡಿ ಹಣ ತರಲು ನಿರ್ಧಾರ ಮಾಡಿದೆ.. ದೇವಸ್ಥಾನದ ಬಳಿ ಹೂವು ಮಾರುತ್ತಿದ್ದ ಮಹಿಳೆಯ ಬಳಿ ನಾನು ಹಣ ಕದಿಯುವಾಗ ಆಕೆ ನೋಡಿಬಿಟ್ಟಳು.. ಆಕೆ ಗಲಾಟೆ ಮಾಡಿ ಎಲ್ಲರನ್ನೂ ಕರೆದು ನನ್ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರೆ ನನ್ನ ಮಗನ ಗತಿ ಏನು ಎಂಬ ಯೋಚನೆ ನನ್ನದಾಯಿತು.. ಹೀಗಾಗಿ ಸ್ವಲ್ಪವೂ ಯೋಚಿಸದೇ ಆಕೆಯನ್ನು ಸಾಯಿಸಿ, ಆಕೆಯ ಬಳಿ ಇದ್ದ 1500 ರೂಪಾಯಿ ಕದ್ದುಕೊಂಡು ಹೋದೆ.. ಮಗ ಈಗ ಚೇತರಿಸಿಕೊಂಡಿದ್ದಾನೆ ಎಂದು ಕಲ್ಪೇಶ್‌ ಹೇಳಿದ್ದಾನೆ..
ಈಗ ಕಲ್ಪೇಶ್‌ ಮಗ ಹುಷಾರಾಗಿ ಮನೆ ಸೇರಿದ್ದಾನೆ.. ಇತ್ತ ಕಲ್ಪೇಶ್‌ ಅವರು ಮಗನ ಜೀವ ಉಳಿಸುವುದಕ್ಕಾಗಿ ಮತ್ತೊಬ್ಬರ ಜೀವ ತೆಗೆದು ಜೈಲು ಸೇರಿದ್ದಾನೆ..

ಇದನ್ನೂ ಓದಿ; ರೆಸಾರ್ಟ್‌ನಲ್ಲಿ ಪತಿ ಮರ್ಮಾಂಗಕ್ಕೆ ಕಚ್ಚಿದ ಚೇಳು!; ಕಣ್ಣೀರಿಟ್ಟ ಪತ್ನಿ!

Share Post