Cinema

ಒಳ್ಳೆಯ ಅಭಿಮಾನಿಗಳು ಸಿಕ್ಕಿದ್ದರಿಂದ ನಾನು ಒಳ್ಳೆಯವನಾಗಿದ್ದೇನೆ; ನಟ ಸುದೀಪ್‌

ಬೆಂಗಳೂರು(Bengaluru); ಇಂದು ಕನ್ನಡದ ಖ್ಯಾತ ನಟ ಸುದೀಪ್‌ ಅವರು 51 ಜನ್ಮದಿನವನ್ನು ಅದ್ದೂರಿಯಿಂದ ಆಚರಣೆ ಮಾಡಿಕೊಂಡಿದ್ದಾರೆ.. ಜಯನಗರದ MES ಮೈದಾನದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸಾವಿರಾರು ಅಭಿಮಾನಿಗಳು ಭಾಗಿಯಾಗಿದ್ದರು.. ಈ ವೇಳೆ ಮಾತನಾಡಿರುವ ನಟ ಸುದೀಪ್‌, ನನ್ನ ಅಭಿಮಾನಿಗಳ ಒಳ್ಳೆಯವರು, ಹೀಗಾಗಿ ನಾನೂ ಒಳ್ಳೆಯವನಾಗಿದ್ದೇನೆ ಎಂದು ಹೇಳಿದ್ದಾರೆ..

ಇದನ್ನೂ ಓದಿ; ಬಾಂಗ್ಲಾದ ಎಳೆ ಹುಡುಗಿಯರನ್ನು ಕರೆತಂದು ವೇಶ್ಯಾವಾಟಿಕೆ!

ಅಭಿಮಾನಿಗಳು ನಮ್ಮ ಪ್ರತಿಬಿಂಬವಾಗಿರುತ್ತಾರೆ.. ನನ್ನ ಅಭಿಮಾನಿಗಳು ಒಳ್ಳೆಯವರಾದ್ದರಿಂದ ನಾನು ಎಲ್ಲೇ ಹೋದರೂ ತಲೆ ಎತ್ತಿಕೊಂಡು ಓಡಾಡುತ್ತೇನೆ. ನಾನು ಅಭಿಮಾನಿಗಳಿಗೆ ಕಳಂಕ ತರುವ ಕೆಲಸ ಮಾಡಿಲ್ಲ. ಬರೀ ಸಿನಿಮಾದಿಂದ ಮಾತ್ರ ಹೀರೋ ಆಗೋಕೆ ಸಾಧ್ಯವಿಲ್ಲ. ವ್ಯಕ್ತತ್ವದಿಂದ ಹೀರೋ ಆಗಬೇಕು ಎಂಬರ್ಥದಲ್ಲಿ ಸುದೀಪ್‌ ಅವರು ಮಾತನಾಡಿದ್ದಾರೆ..

ಇದನ್ನೂ ಓದಿ; ಪ್ರಶ್ನೆಗಳ ಭಾಷಾಂತರದಲ್ಲಿ ಲೋಪ; KAS ಮರುಪರೀಕ್ಷೆಗೆ ಸಿಎಂ ಆದೇಶ

ಅಭಿಮಾನಿಗಳಿಂದ ಬರುವ ಕೂಗು ಏನಿದೆ ಅದು ನನ್ನನ್ನು ತಗ್ಗಿ ಬಗ್ಗಿ ನಡೆಯುವಂತೆ ಮಾಡಿದೆ.. ಆದಷ್ಟು ಬೇಗ ಮ್ಯಾಕ್ಸ್‌ ರಿಲೀಸ್‌ ಡೇಟ್‌ ಬಹಿರಂಗ ಮಾಡುತ್ತೇನೆ ಎಂದು ಸುದೀಪ್‌ ಇದೇ ವೇಳೆ ಹೇಳಿದರು..

Share Post