BengaluruCrime

ಜೈಲು ಹಿಂಗೆಲ್ಲಾ ಇರುತ್ತಾ..?; ಮಜಾ ಮಾಡ್ತಿದ್ದಾರಾ ದರ್ಶನ್‌..?

ಬೆಂಗಳೂರು; ಜೈಲಿನಲ್ಲಿ ದುಡ್ಡಿದ್ದರೆ ರಾಜಾತಿಥ್ಯ ಸಿಗುತ್ತದೆ ಎಂದು ಹೇಳಲಾಗುತ್ತದೆ.. ಈ ಅನುಮಾನ ಈಗ ಮತ್ತಷ್ಟು ಬಲವಾಗಿದೆ.. ಯಾಕಂದ್ರೆ ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ನಟ ದರ್ಶನ್‌, ಜೈಲಿನಲ್ಲಿ ರೌಡಿ ಶೀಟರ್‌ ಒಬ್ಬನ ಜೊತೆ ಸಿಗರೇಟ್‌ ಸೇದುತ್ತಾ ಕಾಫಿ ಕುಡಿಯುತ್ತಾ ಖುಷಿಯಾಗಿರುವ ಫೋಟೋ ಒಂದು ಈಗ ವೈರಲ್‌ ಆಗುತ್ತಿದೆ.. ಸ್ಪೆಷಲ್‌ ಬ್ಯಾರಕ್‌ನಲ್ಲಿರುವ ದರ್ಶನ್‌ ಜೈಲಿನಲ್ಲೂ ಆರಾಮಾಗಿ ಕಾಲ ಕಳೆಯುತ್ತಿದ್ದಾರೆ ಎನ್ನಲಾಗ್ತಿದೆ.. ಇದಕ್ಕೆ ಸಾಕ್ಷಿಯಾಗಿ ಒಂದು ಫೋಟೋ ಸಿಕ್ಕಿದೆ.. ಆ ಫೋಟೊ ಅಸಲಿಯತ್ತುನ ಬಗ್ಗೆ ಪ್ರಶ್ನೆ ಇದೆಯಾದರೂ, ಬಹುತೇಕರು ಇದು ನೈಜ ಫೋಟೋ ಎಂದೇ ಹೇಳುತ್ತಿದ್ದಾರೆ..

ಇದನ್ನೂ ಓದಿ; ಪತ್ನಿಯ ಕುಡಿತ ಬಿಡಿಸಲು ರಿಹಬ್‌ಗೆ ಸೇರಿಸಿದ ಗಂಡ; ಕೆಲಸದವನೊಂದಿಗೆ ಓಡಿಹೋದ ಪತ್ನಿ!

ದರ್ಶನ್‌ ಜೊತೆ ಇನ್ನೂ ಇಬ್ಬರಿದ್ದು, ಅದರಲ್ಲಿ ಒಬ್ಬ ರೌಡಿ ಶೀಟರ್‌ ವಿಲ್ಸನ್‌ ಗಾರ್ಡನ್‌ ನಾಗ ಎಂದು ತಿಳಿದುಬಂದಿದೆ.. ಆತ ಸಿದ್ದಾಪುರದ ಮಹೇಶ್‌ ಎಂಬಾತನ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾನೆ.. ಇದರ ಜೊತೆಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಲ್ಲೊಬ್ಬನಾದ ನಾಗರಾಜ್‌ ಇದ್ದಾನೆ.

ಇದನ್ನೂ ಓದಿ; ಹೊಸ ಸಿಎಂ ಹುಡುಕುತ್ತಿದೆಯಾ ಕಾಂಗ್ರೆಸ್‌ ಹೈಕಮಾಂಡ್‌?; ಯಾರಿಗೆ ಅವಕಾಶ ಇದೆ..?

Share Post