BengaluruCrime

ಪತ್ನಿಯ ಕುಡಿತ ಬಿಡಿಸಲು ರಿಹಬ್‌ಗೆ ಸೇರಿಸಿದ ಗಂಡ; ಕೆಲಸದವನೊಂದಿಗೆ ಓಡಿಹೋದ ಪತ್ನಿ!

ಬೆಂಗಳೂರು; ಪತಿ ವಿಪರೀತ ಕುಡಿಯುತ್ತಾನೆ ಎಂದು ಹೇಳುವ ಮಹಿಳೆಯರನ್ನು ನೋಡಿದ್ದೇವೆ.. ಆದ್ರೆ ಇದು ರಿವರ್ಸ್‌.. ಇಲ್ಲಿ ಪತ್ನಿ ವಿಪರೀತ ಕುಡಿಯುತ್ತಿದ್ದು, ಕುಡಿತದ ಚಟ ಬಿಡಿಸಲು ಗಂಡ ರಿಹಬಿಲಿಟೇಷನ್‌ ಸೆಂಟರ್‌ ಸೇರಿಸಿದ್ದ.. ಕುಡಿತ ಬಿಡಬೇಕಿದ್ದ ಪತ್ನಿ ಈಗ ಗಂಡನನ್ನೇ ಬಿಟ್ಟುಹೋಗಿದ್ದಾಳೆ.. ರಿಹಬಿಲಿಟೇಷನ್‌ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಹುಡುಗನೊಂದಿಗೆ ಆಕೆ ಓಡಿಹೋಗಿದ್ದಾಳೆ ಎಂಬ ಅನುಮಾನವನ್ನು ಆಕೆ ಗಂಡ ವ್ಯಕ್ತಪಡಿಸುತ್ತಿದ್ದಾನೆ.. ಹೆಂಡತಿಯನ್ನು ಹುಡುಕಿಕೊಡುವಂತೆ ಪೊಲೀಸರ ಮೊರೆ ಹೋಗಿದ್ದಾನೆ..

ಬೆಂಗಳೂರಿನ ಬಾಗಲಗುಂಟೆ ಬಳಿಯ ಮಂಜುನಾಥ್‌ ನಗರದಲ್ಲಿ ಈ ಘಟನೆ ನಡೆದಿದೆ.. ನೆಲಮಂಗಲದ ದಿನ್ನೇಪಾಳ್ಯದವರಾದ ಈ ದಂಪತಿ ಬಾಗಲಗುಂಟೆಯಲ್ಲಿ ವಾಸವಿದ್ದರು.. ಇವರಿಗೆ 11 ವರ್ಷದ ಮಗ ಕೂಡಾ ಇದ್ದಾರೆ.. ಆದ್ರೆ ಪತ್ನಿ ಜಾಸ್ತಿ ಕುಡಿಯುತ್ತಾಳೆ ಎಂದು ಕುಡಿತ ಬಿಡಿಸಲು ಗಂಡ ಗಂಗರಾಜು ಪತ್ನಿಯನ್ನು ರಿಹಬಿಲಿಟೇಷನ್‌ ಸೆಂಟರ್‌ಗೆ ಸೇರಿಸಿದ್ದರಂತೆ.. ಅದಾದ ಮೇಲೆ ಆಗಸ್ಟ್‌ 10ನೇ ತಾರೀಖು ಮನೆಗೆ ಕರೆದುಕೊಂಡು ಬಂದಿದ್ದಾರೆ.. ಆದ್ರೆ ಆಗಸ್ಟ್‌ 22 ರಂದು ಮಗನ ಪಿಜಿಗೆ ಹೋಗುತ್ತೇನೆ ಎಂದು ಹೋದ ಪತ್ನಿ ವಾಪಸ್‌ ಬಂದಿಲ್ಲವಂತೆ.. ಹೀಗಾಗಿ ರಿಹಬಿಲಿಟೇಷನ್‌ನಲ್ಲಿ ಕೆಲಸ ಮಾಡುವ ಹುಡುಗನ ಜೊತೆಯೇ ಓಡಿಹೋಗಿರಬಹುದೆಂದು ಗಂಡ ಅನುಮಾನಪಡುತ್ತಿದ್ದಾನೆ.. ಈ ಬಗ್ಗೆ ಬಾಗಲಗುಂಟೆ ಪೊಲೀಸ್‌ ಸ್ಟೇಷನ್‌ನಲ್ಲಿ ಮಿಸ್ಸಿಂಗ್‌ ಕಂಪ್ಲೇಂಟ್‌ ದಾಖಲು ಮಾಡಲಾಗಿದೆ..

Share Post