CrimePolitics

ಸಿಎಂ ಪತ್ನಿ ಬರೆದ ಪತ್ರವನ್ನು ಅಧಿಕಾರಿಗಳು ತಿರುಚಿದರಾ..?

ಮೈಸೂರು; ಮುಡಾದಲ್ಲಿ ಬದಲಿ ನಿವೇಶನಕ್ಕಾಗಿ ಸಿಎಂ ಸಿದ್ದರಾಮಯ್ಯ ಪತ್ನಿ ಬರೆದ ಪತ್ರವನ್ನು ಅಧಿಕಾರಿಗಳು ತಿರುಚಿದ್ದಾರೆಯೇ ಎಂಬ ಅನುಮಾನ ಶುರುವಾಗಿದೆ.. ಸಿಎಂ ಪತ್ನಿ ಪಾರ್ವತಿಯವರು ಮುಡಾಗೆ ಬದಲಿ ನಿವೇಶನಗಳಿಗಾಗಿ ಪತ್ರ ಬರೆದಿದ್ದು, ಅದರಲ್ಲಿ ಒಂದು ಸಾಲಿನಲ್ಲಿ ಅರ್ಧ ಭಾಗವನ್ನು ವೈಟ್ನರ್‌ನಿಂದ ಅಳಿಸಲಾಗಿದೆ.. ಹೀಗಾಗಿ ಅಲ್ಲಿ ಏನು ಬರೆದಿದ್ದರು ಎಂಬುದರ ಬಗ್ಗೆ ಅನುಮಾನ ಮೂಡಿದೆ.. ಪ್ರಕರಣ ಬಯಲಿಗೆ ಬಂದ ಮೇಲೆ ಅಧಿಕಾರಿಗಳು ಆ ಸಾಲನ್ನು ಅಳಿಸಿದರೇ ಎಂಬ ಬಗ್ಗೆ ಅನುಮಾನ ಮೂಡಿದೆ..

ಇದನ್ನೂ ಓದಿ; ಆಟಿಕೆ ಎಂದು ಹಾವನ್ನು ಕಚ್ಚಿ ಸಾಯಿಸಿದ ಪುಟ್ಟ ಮಗು!

ದೇವನೂರು ಬಳಿ ಸಿಎಂ ಪತ್ನಿ ಪಾರ್ವತಿಯವರಿಗೆ ಅರಶಿನ ಕುಂಕುಮಕ್ಕೆ ಬಂದಿದ್ದ ಜಮೀನನ್ನು ಮುಡಾ ವಶಪಡಿಸಿಕೊಂಡಿತ್ತು.. ಅದಕ್ಕೆ ಪ್ರತಿಯಾಗಿ ಮೂಡಾದವರು ಮೈಸೂರಿನ ವಿಜಯನಗರ ೨ ಮತ್ತು ೩ನೇ ಹಂತದಲ್ಲಿ 14 ಸೈಟುಗಳನ್ನು ನೀಡಲಾಗಿತ್ತು.. ಪ್ರತಿಷ್ಠಿತ ಬಡಾವಣೆ ಸೈಟುಗಳನ್ನು ಪಡೆದು ಲಾಭ ಮಾಡಿಕೊಳ್ಳಲಾಗಿದೆ ಅನ್ನೋದು ಆರೋಪ.. ಆದ್ರೆ ಸಿಎಂ ಸಿದ್ದರಾಮಯ್ಯ ಅವರು ಹೇಳೋದು, ನಾವು ಇಂತಹದ್ದೇ ಕಡೆ ಸೈಟು ಕೊಡಿ ಎಂದು ಕೇಳಿರಲಿಲ್ಲ.. ಮುಡಾದವರೇ ಸೈಟು ಕೊಟ್ಟಿದ್ದಾರೆ ಎಂದು ಹೇಳಿದ್ದರು..

ಇದನ್ನೂ ಓದಿ; ಅದಕ್ಕೆ ಒಲ್ಲೆ ಪ್ರಿಯತಮ!; ಚಾಕುವಿನಿಂದ ದಾಳಿ ಮಾಡಿದ ಪ್ರಿಯತಮೆ!

ಆದ್ರೆ ಸಿಎಂ ಪತ್ನಿ ಬರೆದಿರುವ ಪತ್ರ ಈಗ ಬಹಿರಂಗವಾಗಿದ್ದು, ಅದರಲ್ಲಿ ಇಂತಹದ್ದೇ ಸ್ಥಳದಲ್ಲಿ ಸೈಟು ಕೇಳಿದ್ದರೇ ಎಂಬುದರ ಬಗ್ಗೆ ಅನುಮಾನ ಮೂಡಿದೆ.. ಯಾಕೆಂದರೆ ಪತ್ರದಲ್ಲಿ ಒಂದು ಸಾಲನ್ನು ವೈಟ್ನರ್‌ನಲ್ಲಿ ಅಳಿಸಲಾಗಿದೆ.. ಅಲ್ಲಿ ಇಂತಹದ್ದೇ ಸ್ಥಳದಲ್ಲಿ ಸೈಟುಗಳನ್ನು ಕೊಡಿ ಎಂದು ಬರೆದಿದ್ದರೇ ಎಂಬುದರ ಬಗ್ಗೆ ಅನುಮಾನ ಮೂಡುತ್ತಿದೆ..

Share Post