CrimeNational

ಪೋಷಕರೇ ಬಾಲಕಿಯನ್ನು ಕೊಂದು ಸುಟ್ಟು ಭಸ್ಮ ಮಾಡಿದರು..!

ಚಿತ್ತೂರು(Annamayya district); ಆಪ್ರಾಪ್ತ ಬಾಲಕಿಯೊಬ್ಬಳು ನಾಪತ್ತೆಯಾಗಿದ್ದಳು.. ಪೊಲೀಸರು ಆಕೆಯನ್ನು ಹುಡುಕಿ ಕರೆತಂದು ಪೋಷಕರಿಗೆ ಒಪ್ಪಿಸಿದ್ದರು.. ಆದ್ರೆ ಬಾಲಕಿ ಬಂದ ಎರಡು ದಿನಗಳಿಗೇ ಆಕೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ.. ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡದೇ ಬಾಲಕಿಯ ದಹನಕ್ರಿಯೆ ನಡೆಸಲಾಗಿದೆ.. ಆದ್ರೆ ಇದು ಮರ್ಯಾದಾ ಹತ್ಯೆ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.. ಬಾಲಕಿ ಬೇರೆ ಜಾತಿಯ ಹುಡುಗನನ್ನು ಪ್ರೀತಿಸುತ್ತಿದ್ದರಿಂದ ಆಕೆಯನ್ನು ಪೋಷಕರೇ ಕೊಲೆ ಮಾಡಿ ಸುಟ್ಟಿರಬಹುದು ಎಂದು ಶಂಕಿಸಲಾಗಿದೆ.. ಈ ಬಗ್ಗೆ ಪೊಲೀಸರು ತನಿಖೆ ಶುರು ಮಾಡಿದ್ದಾರೆ..

ಇದನ್ನೂ ಓದಿ; ರಾಜ್ಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆಯಾಗಿ ಸೌಮ್ಯಾರೆಡ್ಡಿ ನೇಮಕ

ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆ ತಂಬಳ್ಳಪಲ್ಲೆ ಮಂಡಲ್‌ ಸೇರಿದ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ.. ಬಾಲಕಿ ಜುಲೈನಿಂದ ನಾಪತ್ತೆಯಾಗಿದ್ದಳು.. ಹೀಗಾಗಿ ಪೋಷಕರು ನಾಪತ್ತೆ ಕೇಸ್‌ ದಾಖಲು ಮಾಡಿದ್ದರು.. ಅನಂತರ ಪೊಲೀಸರು ಹುಡುಕಿ ಆಕೆಯನ್ನು ಕರೆದುಕೊಂಡು ಬಂದಿದ್ದರು.. ಅದಾದ ಎರಡು ದಿನಕ್ಕೆ ಸಾವನ್ನಪ್ಪಿದ್ದಾಳೆ.. ಈ ಬಾಲಕಿ ಯುವಕನೊಬ್ಬನನ್ನು ಲವ್‌ ಮಾಡುತ್ತಿದ್ದಳು. ಆ ಕಾರಣಕ್ಕಾಗಿಯೇ ಆಕೆ ಆ ಹುಡುಗನೊಂದಿಗೆ ಪರಾರಿಯಾಗಿದ್ದಳು.. ಅಪ್ರಾಪ್ತೆಯಾಗಿದ್ದರಿಂದ ಪೊಲೀಸರು ಆತನಿಂದ ಆಕೆಯನ್ನು ಬಿಡಿಸಿ ಪೋಷಕರಿಗೆ ಒಪ್ಪಿಸಿದ್ದರು..

ಇದನ್ನೂ ಓದಿ;ಆಸ್ತಿಗಾಗಿ ತಂದೆಯನ್ನೇ ಕೊಚ್ಚಿ ಕೊಲೆ ಮಾಡಿದ ಮಗ!

ಹೀಗಿರುವಾಗಲೇ ತಪಸಿಮಾನುಗುಟ್ಟ ಎಂಬಲ್ಲಿ ಬಾಲಕಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು.. ಪೊಲೀಸರು ಅಲ್ಲಿಗೆ ಬರುವಷ್ಟರಲ್ಲಿ ಪೋಷಕರು ಆಕೆಯನ್ನು ಅಲ್ಲಿಯೇ ಸುಟ್ಟು ಭಸ್ಮ ಮಾಡಿದ್ದರು.. ಹೀಗಾಗಿ ಇದು ಮರ್ಯಾದಾ ಹತ್ಯೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ..

 

Share Post