BengaluruCrime

ರಾತ್ರಿ ಬರ್ತ್‌ಡೇ ಪಾರ್ಟಿಗೆಂದು ಹೋದ ಮಗ; ಬೆಳಗ್ಗೆ ಕೊಲೆ ಸುದ್ದಿ ಕೇಳಿ ತಾಯಿ ಕಂಗಾಲು!

ಬೆಂಗಳೂರು; ಬರ್ತ್‌ ಡೇ ಪಾರ್ಟಿ ಇದೆ ಎಂದು ಮಗ ರಾತ್ರಿ ಮನೆಯಿಂದ ಹೊರಹೋಗಿದ್ದ. ಆದ್ರೆ ಬೆಳಗಾಗೋಷ್ಟರಲ್ಲಿ ಮಗ ಕೊಲೆಯಾಗಿದ್ದಾನೆ ಎಂಬ ಸುದ್ದಿ ತಾಯಿಯ ಕಿವಿಗೆ ಬಿದ್ದಿತ್ತು. ಈ ಸುದ್ದಿ ಕೇಳಿ ಆ ತಾಯಿ ಕಂಗಾಲಾಗಿದ್ದಾಳೆ, ಹೊಸ ವರ್ಷದ ದಿನವೇ ಆಕೆಗೆ ಕೆಟ್ಟ ಗಳಿಗೆ ಎದುರಾಗಿದೆ.

21 ವರ್ಷ ವಿಜಯ್‌ ಎಂಬಾತನೇ ಕೊಲೆಯಾದ ಯುವಕ. ಈತ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ. ನಿನ್ನೆ ವಿಜಯ್‌ ಗೆಳೆಯರ ಜೊತೆ ಬರ್ತ್‌ ಡೇ ಹಾಗೂ ಹೊಸ ವರ್ಷದ ಸೆಲೆಬ್ರೇಷನ್‌ಗೆ ಮನೆಯಿಂದ ಹೊರಗೆ ಬಂದಿದ್ದ. ಪಾರ್ಟಿ ಎಲ್ಲಾ ಮುಗಿದ ಮೇಲೆ ವಿಜಯ್‌ ಹಾಘು ಆತನ ಗೆಳೆಯರ ನಡುವೆ ಯಾವುದೋ ಕಾರಣಕ್ಕೆ ಜಗಳ ಶುರುವಾಗಿದೆ. ಆಟೋದಲ್ಲಿ ಮನೆಗೆ ಹೋಗೋ ಸಮಯದಲ್ಲಿ ಎಲ್ಲರೂ ಜಗಳ ಮಾಡಿಕೊಂಡಿದ್ದಾರೆ. ಇದೇ ವೇಳೆ ಸ್ನೇಹಿತನೊಬ್ಬ ವಿಜಯ್‌ನ ಎಎದೆಗೆ ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವಕ್ಕೊಳಗಾಗಿದ್ದ ವಿಜಯ್‌ನನ್ನು ಎಲ್ಲರೂ ಸೇರಿ ಶ್ರೀನಿವಾಸನಗರ ಬಸ್‌ ನಿಲ್ದಾಣದ ಮುಂದೆ ಬಿಸಾಕಿ ಹೋಗಿದ್ದಾರೆ. ರಾತ್ರಿ 1 ಗಂಟೆ ಸಮಯದಲ್ಲಿ ವಿಜಯ್‌ನನ್ನು ಬಿಸಾಕಿದ್ದು, ಯಾರೂ ನೋಡಿಕೊಂಡಿಲ್ಲ.

ತೀವ್ರ ರಕ್ತಸ್ರಾವದಿಂದ ನರಳಿ ನರಳಿ ವಿಜಯ್‌ ಅಲ್ಲಿಯೇ ಸಾವನ್ನಪ್ಪಿದ್ದಾನೆ. ನನಗೆ ಒಬ್ಬನೇ ಮಗ. ಆತನೇ ಇಲ್ಲ ಎಂದ ಮೇಲೆ ನಮಗೆ ಯಾರು ಗತಿ ಎಂದು ಆ ತಾಯಿ ಕಣ್ಣೀರಿಡುತ್ತಿದ್ದಾರೆ. ಹನುಮಂತನಗರ ಪೊಲೀಸ್‌ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

 

Share Post