CrimeNational

ಭೀಕರ ರಸ್ತೆ ಅಪಘಾತದಲ್ಲಿ ಐವರು ವಿದ್ಯಾರ್ಥಿಗಳ ದುರ್ಮರಣ!

ಚೆನ್ನೈ; ತಮಿಳುನಾಡಿನಲ್ಲಿ ಭೀಕರ ರಸ್ತೆ ಅಫಘಾತ ಸಂಭವಿಸಿದ್ದು, ಒಂದೇ ಕಾಲೇಜಿನ ಐವರು ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿದ್ದಾರೆ.. ಒಂದೇ ಕಾಲೇಜಿನಲ್ಲಿ ಓದುತ್ತಿದ್ದ ಏಳು ಜನ ಸ್ನೇಹಿತರು ಎರಡು ದಿನಗಳ ಪ್ರವಾಸ ಕೈಗೊಂಡು ದೇವಸ್ಥಾನಕ್ಕೆ ಹೋಗುತ್ತಿದ್ದರು.. ಈ ವೇಳೆ ಭೀಕರ ಅಪಘಾತ ಸಂಭವಿಸಿ ಈ ದುರಂತ ನಡೆದಿದೆ.. ತಿರುವಳ್ಳೂರು ಜಿಲ್ಲೆಯ ತಿರುತ್ತಣಿ ಬಳಿಯ ರಾಮಂಚೇರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ..
ವೇಗವಾಗಿ ಬಂದ ಟ್ರಕ್‌ ಒಂದು ಎದುರಿಗೆ ಬರುತ್ತಿದ್ದ ವಿದ್ಯಾರ್ಥಿಗಳಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದರಿಂದ ಈ ದುರಂತ ಸಂಭವಿಸಿದೆ.. ಘಟನೆಯಲ್ಲಿ ಕಾರಿನಲ್ಲಿದ್ದ ಉಳಿದಿಬ್ಬರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.. ಪ್ರದ್ದೂರಿನ ಗಿಡ್ಡಲೂರು ನಿತೀಶ್ (21), ತಿರುಪತಿಯ ಯುಗೇಶ್ (23), ಚೇತನ್ (22), ಕರ್ನೂಲಿನ ರಾಮಮೋಹನ್ (21), ವಿಜಯವಾಡದ ಬನ್ನು ನಿತೀಶ್ (22) ಎಂಬುವವರು ಮೃತಪಟ್ಟಿದ್ದಾರೆ. ನೆಲ್ಲೂರು ಮೂಲದ ವಿಷ್ಣು ಮತ್ತು ಪ್ರಕಾಶಂ ಜಿಲ್ಲೆಯ ಚೈತನ್ಯ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..
ಎಲ್ಲರೂ ಆಂಧ್ರಪ್ರದೇಶದವರಾಗಿದ್ದು, ಚೆನ್ನೈ ಬಳಿಯ ಎಸ್‌ಆರ್‌ಎಂ ಕಾಲೇಜಿನಲ್ಲಿ ಮೂರನೇ ವರ್ಷದ ಎಂಜಿನಿಯರಿಂಗ್‌ ಓದುತ್ತಿದ್ದರು ಎಂದು ತಿಳಿದುಬಂದಿದೆ.. ಶನಿವಾರ ಭಾನುವಾರ ರಜೆ ಇದ್ದುದರಿಂದ ಪ್ರವಾಸ ಕೈಗೊಂಡಿದ್ದರು.. ತಿರುವಣ್ಣಾಮಲೈಗೆ ಭೇಟಿ ನೀಡಿದ್ದ ವಿದ್ಯಾರ್ಥಿಗಳು ಅರುಣಾಚಲೇಶ್ವರನ ದರ್ಶನ ಪಡೆದುಕೊಂಡು ಚೆನ್ನೈನತ್ತ ಮರಳುತ್ತಿದ್ದರು. ಈ ವೇಳೆ ದುರಂತ ನಡೆದಿದೆ ಎಂದು ತಿಳಿದುಬಂದಿದೆ..

Share Post