CrimeNational

ಆಸಿಡ್‌ ಜೊತೆ ಮದುವೆ ಮಂಟಪಕ್ಕೆ ಬಂದ ಯುವತಿ ರಂಪಾಟ!

ನಂದಲೂರು(ಆಂಧ್ರಪ್ರದೇಶ); ಕೆಲವೇ ಕ್ಷಣಗಳಲ್ಲಿ ಮುಹೂರ್ತ ನಡೆಯಬೇಕಿತ್ತು.. ಬಂಧು ಮಿತ್ರರೆಲ್ಲಾ ಮದುವೆ ಸಂಭ್ರಮದಲ್ಲಿ ಬ್ಯುಸಿಯಾಗಿದ್ದರು.. ಕಲ್ಯಾಣ ಮಂಟಪ ಗಿಜಿಗುಡುತ್ತಿತ್ತು.. ಎಲ್ಲೆಡೆ ಸಂಭ್ರಮ ಮನೆ ಮಾಡಿತ್ತು.. ಹೀಗಿರುವಾಗಲೇ ಎಲ್ಲರಿಗೂ ಶಾಕ್‌ ಕಾದಿತ್ತು.. ಸರಿಯಾದ ಸಮಯಕ್ಕೆ ಯುವತಿಯೊಬ್ಬಳು ಅಲ್ಲಿ ಎಂಟ್ರಿ ಕೊಟ್ಟಿದ್ದಳು.. ನನ್ನನ್ನು ಪ್ರೀತಿಸಿ ಬೇರೊಬ್ಬಳನ್ನು ಮದುವೆಯಾಗುತ್ತೀಯಾ ಅಂತ ವರ ಜೊತೆ ಕ್ಯಾತೆ ತೆಗೆದಿದ್ದಾಳೆ.. ಆಸಿಡ್‌ ಹಾಗೂ ಚಾಕು ತೋರಿಸಿ ಅವಾಂತರ ಸೃಷ್ಟಿ ಮಾಡಿದ್ದಾಳೆ..
ಇದರಿಂದಾಗಿ ಕಲ್ಯಾಣ ಮಂಟಪ ಕೆಲಹೊತ್ತು ರಣಾಂಗಣವಾಗಿ ಮಾರ್ಪಟ್ಟಿತ್ತು.. ಅನ್ನಮಯ್ಯ ಜಿಲ್ಲೆಯ ನಂದಲೂರಿನಲ್ಲಿ ಈ ಘಟನೆ ನಡೆದಿದೆ.. ಇಲ್ಲಿಯ ರೈಲ್ವೇ ಕೋಡೂರಿನ ಸೈಯದ್ ಬಾಷಾ ಯುವತಿಯೊಬ್ಬಳೊಂದಿಗೆ ನಂದಲೂರಿನಲ್ಲಿ ವಿವಾಹವಾಗುತ್ತಿದ್ದ. ಈ ನಡುವೆ ತಿರುಪತಿಯ ಮತ್ತೊಬ್ಬ ಯುವತಿ ಬಾಷಾನನ್ನು ಹುಡುಕಿಕೊಂಡು ರೈಲ್ವೆ ಕೋಡೂರಿಗೆ ಬಂದಿದ್ದಾಳೆ.. ಹತ್ತು ವರ್ಷಗಳಿಂದ ನನ್ನ ಜೊತೆ ವಿವಾಹೇತರ ಸಂಬಂಧ ಹೊಂದಿದ್ದ ಭಾಷಾ ಕೆಲ ದಿನಗಳಿಂದ ನಾಪತ್ತೆಯಾಗಿದ್ದ.. ಈಗ ಬೇರೆ ಮದುವೆಯಾಗುತ್ತಿದ್ದಾನೆ ಎಂದು ಆಕೆ ಆರೋಪ ಮಾಡಿದ್ದಾಳೆ.. ನೇರವಾಗಿ ನಂದಲೂರಿನ ಮದುವೆ ಮಂಟಪಕ್ಕೆ ಬಂದ ಆಕೆ, ವರ ಭಾಷಾ ನನಗೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ.. ಆಸಿಡ್‌ ಮತ್ತು ಚಾಕುವಿನಿಂದ ವರನ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾಳೆ.. ಈ ವೇಳೆ ಅಲ್ಲಿದ್ದವರು ತಡೆಯಲು ಬಂದಿದ್ದು, ಆಸಿಡ್‌ ಕರಿಷ್ಮಾ ಎಂಬಾಕೆಯ ಮೇಲೆ ಬಿದ್ದು ಆಕೆ ಸುಟ್ಟು ಗಾಯಗೊಂಡಿದ್ದಾಳೆ..
ಇತ್ತ ವರ ಭಾಷಾ ಚಾಕುವನ್ನು ಕಿತ್ತುಕೊಂಡು ಆಕೆಗೇ ಇರಿದಿದ್ದಾಣೆ.. ಇದರಿಂದಾಗಿ ಆಕೆಯ ಬೆನ್ನು ಹಾಗೂ ಭುಜದ ಮೇಲೆ ಗಾಯಗಳಾಗಿವೆ.. ಆಸಿಡ್‌ ದಾಳಿಗೊಳಗಾದ ಹಾಗೂ ಗಾಯಗೊಂಡ ಪ್ರಿಯತಮೆಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ..

Share Post