CrimeDistricts

ಉಲ್ಲಾಳದಲ್ಲಿ ನಟೋರಿಯಸ್‌ ರೌಡಿಯ ಬರ್ಬರ ಹತ್ಯೆ!

ಮಂಗಳೂರು; ಮಂಗಳೂರು ಹೊರವಲಯದ ಕಲ್ಲಾಪು ಎಂಬಲ್ಲಿ ನಟೋರಿಯಸ್‌ ರೌಡಿಯೊಬ್ಬನನ್ನು ಗುಂಪೊಂದು ಭೀಕರವಾಗಿ ಹತ್ಯೆ ಮಾಡಿದೆ.. ಕಳೆದ ರಾತ್ರಿ ಈ ದುಷ್ಕೃತ್ಯ ಎಸಗಲಾಗಿದೆ.. ಉಲ್ಲಾಳದ ಕಡಪ್ಪಾರ ಸಮೀರ್‌ ಎಂಬಾತನೇ ಕೊಲೆಯಾದ ರೌಡಿಶೀಟರ್‌ ಆಗಿದ್ದಾನೆ..

ಇದನ್ನೂ ಓದಿ; ಕಾಫಿ ಶಾಪ್‌ ಟಾಯ್ಲೆಟ್‌ನಲ್ಲಿ ಕ್ಯಾಮರಾ!; ಆರೋಪಿ ಯಾರು ಗೊತ್ತಾ..?

ರೌಡಿಶೀಟರ್‌ ಕಡಪ್ಪಾರ ಸಮೀರ್‌ ತನ್ನ ತಾಯಿಯ ಜೊತೆ ಊಟಕ್ಕೆಂದು ಹೋಟೆಲ್‌ಗೆ ಹೋಗಿದ್ದ.. ಊಟ ಮುಗಿಸಿ ಹೊರಬರುತ್ತಿದ್ದಂತೆ ಗ್ಯಾಂಗ್‌ ಒಂದು ದಾಳಿ ಮಾಡಿದ್ದು, ಸಮೀರ್‌ನನ್ನು ಅಟ್ಟಾಡಿಸಿ ಕೊಲೆ ಮಾಡಿದೆ.. ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆ ಮಾಡಲಾಗಿದೆ.. ಕೊಲೆ ಮಾಡಿದ ನಂತರ ಆರೋಪಿಗಳು ಎಸ್ಕೇಪ್‌ ಆಗಿದ್ದಾರೆ..

ಇದನ್ನೂ ಓದಿ; ಮಾಜಿ ಶಾಸಕರ ಮನೆ ಆವರಣದಲ್ಲಿ ಸ್ಫೋಟ; ಮಾಜಿ ಶಾಸಕರ ಪತ್ನಿ ದುರ್ಮರಣ!

ಮತ್ತೊಬ್ಬ ನಟೋರಿಯಸ್‌ ರೌಡಿ ಟಾರ್ಗೆಟ್‌ ಇಲಿಯಾಸ್‌ ಹತ್ಯೆ ಕೇಸ್‌ನಲ್ಲಿ ಈ ಕಡಪ್ಪಾರ ಸಮೀರ್‌ ಆರೋಪಿಯಾಗಿದ್ದ.. ವಾರದ ಹಿಂದಷ್ಟೇ ಈತ ಜೈಲಿನಿಂದ ಹೊರಬಂದಿದ್ದ ಎಂದು ತಿಳಿದುಬಂದಿದೆ.. ಅದೇ ಕಾರಣಕ್ಕಾಗಿ ಈತನನ್ನು ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.. ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ..

Share Post