CrimeDistricts

ರೇಸಿಂಗ್‌ ಬೈಕ್‌ ಕೊಡಸದಿದ್ದಕ್ಕೆ ಮಗ ಆತ್ಮಹತ್ಯೆ; ನೊಂದು ರೈಲಿಗೆ ತಲೆ ಕೊಟ್ಟ ತಾಯಿ!

ಹುಬ್ಬಳ್ಳಿ; ಧಾರವಾಡ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಕರೂರು ಗ್ರಾಮದಲ್ಲಿ ದಾರುಣವೊಂದು ನಡೆದಿದೆ.. ಮಗ ರೇಸಿಂಗ್‌ ಬೈಕ್‌ ಕೊಡಿಸುವಂತೆ ಪಟ್ಟು ಹಿಡಿದಿದ್ದ.. ಆದ್ರೆ ಅಪ್ಪನಿಗೆ ಕೊಡಿಸೋದಕ್ಕೆ ಆಗಿರಲಿಲ್ಲ.. ಇದರಿಂದ ಮನನೊಂದು 18 ವರ್ಷ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.. ಮಗ ಸಾವನ್ನಪ್ಪಿದ್ದು ತಿಳಿಯುತ್ತಿದ್ದಂತೆ ಆತನ ತಾಯಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ..

ಇದನ್ನೂ ಓದಿ; ಹೆಂಡತಿ ತವರಿಗೆ ಹೋದಾಗ ಗಂಡ ಮಾಡೋ ಕೆಲಸಗಳೇನು ಗೊತ್ತಾ..?

ಸುರೇಶ್‌ ಎಂಬುವವರ ಮಗ ಧನರಾಜ್‌ ಅಡುಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.. ಇದನ್ನು ನೋಡಿದ ತಾಯಿ ಭಾಗ್ಯಮ್ಮ ನಾಯಕ ಅವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.. ಇನ್ನು ಎರಡು ವರ್ಷದ ಹಿಂದೆಯಷ್ಟೇ ಸುರೇಶ್‌ ಅವರು ಪುತ್ರಿ ಕೂಡಾ ಅನಾರೋಗ್ಯದಿಂದ ಮೃತಪಟ್ಟಿದ್ದಳು.. ಈಗ ಹೆಂಡತಿ ಹಾಗೂ ಮಗನನ್ನೂ ಕಳೆದುಕೊಂಡು ಸುರೇಶ್‌ ಒಬ್ಬಂಟಿಯಾಗಿದ್ದಾರೆ..

ಇದನ್ನೂ ಓದಿ; ಮಹಿಳೆ ತಲೆ ಮೇಲೆ ಕಲ್ಲು ಎತ್ತಿಹಾಕಿ ಬೆಂಕಿ ಇಟ್ಟ ದುಷ್ಕರ್ಮಿಗಳು!

ಧನರಾಜ್‌ ಹರಿಹರದಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ.. ಆತ ರೇಸಿಂಗ್‌ ಬೈಕ್‌ ಖರೀದಿ ಮಾಡಬೇಕು. ಹಣ ಕೊಡಿ ಎಂದು ಪೀಡಿಸುತ್ತಿದ್ದ.. ಆದ್ರೆ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಅಪ್ಪ ಸುರೇಶ್‌ಗೆ ಹಣ ಹೊಂದಿಸಲು ಆಗಿರಲಿಲ್ಲ.. ಇದರಿಂದಾಗಿ ತಂದೆ-ತಾಯಿ ಜೊತೆ ಜಗಳ ತೆಗೆದು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ..

Share Post