CrimeNational

ನಿಂತಿದ್ದ ಐಶಾರಾಮಿ ಬಸ್‌ಗೆ ಲಾರಿ ಡಿಕ್ಕಿ; 6 ಮಂದಿ ದುರ್ಮರಣ!

ಗುಜರಾತ್‌; ಗುಜರಾತ್‌ನ ಅಹಮದಾಬಾದ್‌ ಹಾಗೂ ವಡೋದರಾ ಎಕ್ಸ್‌ಪ್ರೆಸ್‌ ವೇನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ದುರಂತದಲ್ಲಿ 6 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.. ಆನಂದ್‌ ಬಳಿ ಖಾಸಗಿ ಐಶಾರಾಮಿ ಬಸ್‌ಗೆ ಲಾರಿಯೊಂದು ಡಿಕ್ಕಿ ಹೊಡೆದಿದ್ದರಿಂದ ಈ ದುರಂತ ನಡೆದಿದೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ರೇಸಿಂಗ್‌ ಬೈಕ್‌ ಕೊಡಸದಿದ್ದಕ್ಕೆ ಮಗ ಆತ್ಮಹತ್ಯೆ; ನೊಂದು ರೈಲಿಗೆ ತಲೆ ಕೊಟ್ಟ ತಾಯಿ!

ಲಾರು ಡಿಕ್ಕಿ ಹೊಡೆದಿದ್ದರಿಂದ ಬಸ್‌ ಬಹುತೇಕ ಜಖಂಗೊಂಡಿದೆ.. ಘಟನೆಯಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರು.. ಅನಂತರ ಉಳಿದ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.. ಈ ಐಶಾರಾಮಿ ಬಸ್‌ ಟೈಯರ್‌ ಪಂಕ್ಚರ್‌ ಆಗಿದ್ದು, ಬಸ್ಸನ್ನು ನಿಲ್ಲಿಸಿ ರಿಪೇರಿ ಮಾಡಲಾಗುತ್ತಿತ್ತು.. ಹೀಗಾಗಿ ಚಾಲಕ ಹಾಗೂ ಪ್ರಯಾಣಿಕರು ಬಸ್ಸಿನಿಂದ ಇಳಿದು ಪಕ್ಕದಲ್ಲೇ ನಿಂತಿದ್ದರು.. ಈ ವೇಳೆ ಹಿಂದಿನಿಂದ ಬಂದ ಲಾರಿ ಅತಿವೇಗವಾಗಿ ಡಿಕ್ಕಿ ಹೊಡೆದಿದೆ..

ಇದನ್ನೂ ಓದಿ; ಹೆಂಡತಿ ತವರಿಗೆ ಹೋದಾಗ ಗಂಡ ಮಾಡೋ ಕೆಲಸಗಳೇನು ಗೊತ್ತಾ..?

ಬೆಳಗಿನ ಜಾವ 4.30ರ ಸುಮಾರಿಗೆ ಈ ದುರ್ಘಟನೆ ನಡೆದಿದೆ.. ಈ ಬಸ್‌ ಮಹಾರಾಷ್ಟ್ರದಿಂದ ರಾಜಸ್ಥಾನಕ್ಕೆ ಹೋಗುತ್ತಿತ್ತು ಎಂದು ತಿಳಿದುಬಂದಿದೆ..

Share Post