CrimeDistricts

ಐಶಾರಾಮಿ ಕಾರು ಸಿನಿಮೀಯ ರೀತಿಯಲ್ಲಿ ಪಲ್ಟಿ ; ನಂತರ ಆಗಿದ್ದೇನು?

ಮಂಗಳೂರು; ಐಶಾರಾಮಿ ಕಾರ್ ಒಂದು ಡಿವೈಡರ್  ಹಾರಿ ಸಿನಿಮೀಯ ರೀತಿಯಲ್ಲಿ ಪಲ್ಟಿ ಹೊಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಉಜಿರೆ ಬಳಿ ಈ ಘಟನೆ ನಡೆದಿದೆ.

  ವೇಗವಾಗಿ ಬಂದ ಕಾರ್ ಮೊದಲು ಡಿವೈಡರ್ ಗೆ ನುಗ್ಗಿ ಅಲ್ಲಿಂದ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದಿದೆ. ಘಟನೆಯಲ್ಲಿ ಕಾರ್ ಚಾಲಕ ಸಾವನ್ನ ಅಪ್ಪಿದ್ದಾನೆ.

   ಉಜಿರೆ ನಿವಾಸಿ ಪ್ರಜ್ವಲ್ ನಾಯಕ್​ ಮೃತ ದುರ್ದೈವಿ ಎಂದು ಗೊತ್ತಾಗಿದೆ. ಅಪಘಾತದ ತೀವ್ರತೆಗೆ ಐಷಾರಾಮಿ ಬೆಂಜ್ ಕಾರು ಬಹುತೇಕ ನಜ್ಜುಗುಜ್ಜಾಗಿದೆ.

ಇಂದು ಬೆಳಗಿನ ಜಾವದಲ್ಲಿ ಈ ಘಟನೆ ನಡೆದಿದೆ..

 

Share Post