HealthNational

ಸಾಕು ನಾಯಿ ಕಚ್ಚಿ ಅಪ್ಪ, ಮಗ ಸಾವು!

ವಿಶಾಖಾಪಟ್ಟಣ; ಸಾಕು ನಾಯಿ ಕಚ್ಚಿ ತಂದೆ-ಮಗ ರೇಬೀಸ್ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿರುವ ಘಟನೆ ವಿಶಾಖಪಟ್ಟಣಂನಲ್ಲಿ ನಡೆದಿದೆ.

ಭೀಮಿಲಿಯ ನರಸಿಂಗರಾವ್ ಎಂಬ ವ್ಯಕ್ತಿ ನಾಯಿ ಸಾಕುತ್ತಿದ್ದು, ಅದಕ್ಕೆ ಈಗಾಗಲೇ ರೇಬೀಸ್ ಇತ್ತು. ಆ ನಾಯಿ ನರಸಿಂಗ ರಾವ್ ಹಾಗೂ ಅವರ ಮಗ ಭಾರ್ಗವ್ ಗೆ ಕಚ್ಚಿದೆ. ಇದಾದ ಬಳಿಕ ನಾಯಿ ಸಾವನ್ನಪ್ಪಿದೆ. ಅನಂತರ ತಂದೆ ಮತ್ತು ಮಗನಿಗೆ ಆ್ಯಂಟಿ ರೇಬಿಸ್ ಇಂಜೆಕ್ಷನ್ ಹಾಕಿದ್ದಾರೆ. ಆದರೂ ಇಬ್ಬರೂ ಸಾವನ್ನಪ್ಪಿದ್ದಾರೆ. ನರಸಿಂಗರಾವ್ ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಈಗಾಗಲೇ ಪಾರ್ಶ್ವವಾಯುವಿಗೆ ಒಳಗಾಗಿದ್ದರು.

ಮಗ ಭಾರ್ಗವ್ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದು, ಮನೆಯನ್ನು ನೋಡಿಕೊಳ್ಳುತ್ತಿದ್ದ. ತಂದೆ-ಮಗನ ಸಾವು ಭೀಮಿಲಿಯಲ್ಲಿ ತಲ್ಲಣ ಮೂಡಿಸಿದೆ.

Share Post