BengaluruCrime

ಜಾಮೀನಿಗೆ ಅರ್ಜಿ ಸಲ್ಲಿಸ್ತಾರಾ ದರ್ಶನ್‌..?; ಭೇಟಿಯಾದ ವಕೀಲರು ಹೇಳಿದ್ದೇನು..?

ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸ್‌ ಕಸ್ಟಡಿಯಲ್ಲಿ ದರ್ಶನ್‌ ಸೇರಿ 17 ಮಂದಿಯನ್ನು ಇಂದು ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ.. ಪೊಲೀಸ್‌ ಕಸ್ಟಡಿ ಅವಧಿ ಇಂದಿಗೆ ಮುಕ್ತಾಯವಾಗಿದ್ದರಿಂದ ಪೊಲೀಸರು ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.. ಈ ನಡುವೆ ವಕೀಲರು ದರ್ಶನ್‌ ಅವರನ್ನು ಭೇಟಿ ಮಾತುಕತೆ ನಡೆಸಿದ್ದಾರೆ.. ಹೀಗಾಗಿ ಕುತೂಹಲ ಹೆಚ್ಚಾಗಿದೆ..

ಇಂದು ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಗೆ ದರ್ಶನ್‌ ಪರ ವಕೀಲರಾದ ಅನಿಲ್‌ ಬಾಬು ಹಾಗೂ ರಂಗನಾಥ್‌ರೆಡ್ಡಿ ಭೇಟಿ ನೀಡಿದ್ದರು.. ದರ್ಶನ್‌ ಅವರನ್ನು ಭೇಟಿಯಾಗಿದ್ದ ಅವರು, ಪ್ರಕರಣದ ಬೆಳವಣಿಗೆ ಸೇರಿದಂತೆ ಹಲವು ಮಾಹಿತಿಗಳ ಬಗ್ಗೆ ಚರ್ಚೆ ಮಾಡಿದ್ದಾರೆ.. ಅನಂತರ ಮಾತನಾಡಿದ ವಕೀಲ ಅನಿಲ್‌ ಬಾಬು, ಇಂದು ಪೊಲೀಸರು ಕೋರ್ಟ್‌ಗೆ ಹಾಜರು ಮಾಡ್ತಾರೆ.. ಮತ್ತೆ ಕಸ್ಟಡಿಗೆ ಕೇಳುತ್ತಾರೋ ಇಲ್ಲವೋ ಗೊತ್ತಿಲ್ಲ.. ಒಂದು ವೇಳೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರೆ ಅನಂತರ ಬೇಲ್‌ ಅರ್ಜಿ ಬಗ್ಗೆ ಚಿಂತನೆ ಮಾಡಲಾಗುತ್ತದೆ ಎಂದು ಹೇಳಿದರು..

ಪ್ರಕರಣದ ತನಿಖೆ ಬಹುತೇಕ ಮುಗಿದಿದೆ ಎಂದು ಕಾಣುತ್ತದೆ.. ಈ ನಡುವೆ ಬೇಲ್‌ಗಾಗಿ ಅರ್ಜಿ ಹಾಕಬೇಕೋ, ಬೇಡವೋ ಎಂಬುದರ ಬಗ್ಗೆ ನಾವಿನ್ನೂ ಚರ್ಚೆಯನ್ನೇ ಮಾಡಿಲ್ಲ.. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ನಂತರ ನಾವು ಈ ಬಗ್ಗೆ ಚರ್ಚೆ ಮಾಡುತ್ತೇನೆ.. ಇದಕ್ಕೆ ಇನ್ನೂ ಒಂದು ವಾರ ಸಮಯ ಬೇಕಾಗುತ್ತದೆ ಎಂದು ವಕೀಲ ಅನಿಲ್‌ ಬಾಬು ಹೇಳಿದ್ದಾರೆ.. ದರ್ಶನ್‌ ಜೊತೆ ಮಾತನಾಡಿದ್ದೇವೆ.. ಅವರು ಆರೋಗ್ಯ ಚೆನ್ನಾಗಿದೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ..

 

Share Post