BengaluruCrime

ಹೊಸಕೋಟೆಯಲ್ಲಿ ಹಿಟ್‌ ಅಂಡ್‌ ರನ್‌ ಕೇಸ್‌; ಸವಾರನ ತಲೆಯಿಂದ ಹೊರಬಂದ ಮೆದುಳು!

ದೇವನಹಳ್ಳಿ; ಅಪರಿಚಿತ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ.. ಘಟನೆಯಲ್ಲಿ ಬೈಕ್‌ ಸವಾರ ತೀವ್ರವಾಗಿ ಗಾಯಗೊಂಡಿದ್ದು, ಆತನ ಮೆದುಳು ಹೊರಬಂದಿದೆ ಎಂದು ತಿಳಿದುಬಂದಿದೆ.. ಕೂಡಲೇ ಸ್ಥಳೀಯರು ಅಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ..ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರ ಹೊರವಲಯದ ಕೋಲಾರ ರೋಡ್​ನಲ್ಲಿ ಇಂತಹದ್ದೊಂದು ದಾರುಣ ಘಟನೆ ನಡೆದಿದೆ..

ಗಾಯಾಳು ಬೈಕ್‌ ಸವಾರನಿಗೆ ಹೊಸಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.. ಶಸ್ತ್ರ ಚಿಕಿತ್ಸೆ ಮಾಡಿ ವೈದ್ಯ ಸುಪ್ರಿತ್ ಚಿಕಿತ್ಸೆ ನೀಡಿದ್ದಾರೆ. ಗಾಯಾಳುವಿನ ಜೀವ ಉಳಿದಿದೆ ಎಂದು ತಿಳಿದುಬಂದಿದೆ.. ಇನ್ನು ಎಸ್ಕೇಪ್‌ ಆಗಿರುವ ವಾಹನ ಹಾಗೂ ಅದರ ಚಾಲಕನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ..

 

Share Post