Politics

ಚನ್ನಪಟ್ಟಣದಿಂದ ಚುನಾವಣೆಗೆ ಸ್ಪರ್ಧಿಸಲು ದರ್ಶನ್ ತಯಾರಿ ಆಗಿತ್ತಾ..?

ರಾಮನಗರ; ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯಲ್ಲಿ ನಟ ದರ್ಶನ್ ಕಾಣಕ್ಕಿಂಳಿಸಲು ಡಿಕೆ ಬ್ರದರ್ಸ್ ಪ್ಲಾನ್ ಮಾಡಿದ್ದರಾ..? ಇಂಥಹದೊಂದು ಪ್ರಶ್ನೆ ಎದುರಾಗಿದೆ..

  ಈ ಬಗ್ಗೆ ಮಾಜಿ ಸಚಿವ ಸಿ. ಪಿ. ಯೋಗೇಶ್ವರ್ ಮಾತಾಡಿದ್ದಾರೆ.. ಚನ್ನಪಟ್ಟಣದಲ್ಲಿ ಅಚ್ಚರಿ ಅಭ್ಯರ್ಥಿ ಕಣಕ್ಕೆ ಇಳಿಸೋದಾಗಿ ಡಿಕೆ ಬ್ರದರ್ಸ್ ಹೇಳಿದ್ದರು.. ಆ ಅಚ್ಚರಿ ಅಭ್ಯರ್ಥಿ ಜೈಲು ಸೇರಿದ್ದಾರೆ ಎಂದು ಯೋಗೇಶ್ವರ್ ಹೇಳಿದ್ದಾರೆ..

 ಅಚ್ಚರಿ ಅಭ್ಯರ್ಥಿ ಹಾಕುತ್ತೇವೆ ಅಂತ ಡಿ. ಕೆ. ಸುರೇಶ್ ಹೇಳಿದ್ದರು.. ಆ ವ್ಯಕ್ತಿ ಯಾರು ಅಂತ ನೀವೇ ಊಹಿಸಿಕೊಳ್ಳಿ ಎಂದು ಯೋಗೇಶ್ವರ್ ಹೇಳಿದರು.

 ಕುಮಾರಸ್ವಾಮಿಯವರು ಮಂಡ್ಯದಿಂದ ಸಂಸತ್ತಿಗೆ ಹೋಗಿದ್ದಾರೆ.. ಹೀಗಾಗಿ ಅವರು ಚನ್ನಪಟ್ಟಣ ವಿಧಾನಸಭಾ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರೆ.. ಹೀಗಾಗಿ ಅಲ್ಲಿ ಉಪಚುನಾವಣೆ ನಡೆಯಲಿದೆ..

 

Share Post