NationalPolitics

ಪ್ರಮಾಣವಚನದ ವೇಳೆ ರಾಷ್ಟ್ರಪತಿ ಭವನಕ್ಕೆ ಬಂದ ಆ ಪ್ರಾಣಿ ಯಾವುದು..?; ಹುಲಿ ಅಥವಾ ಚಿರತೆ ಎಂಟ್ರಿ ಕೊಟ್ಟಿತ್ತಾ..?

ನವದೆಹಲಿ; ರಾಷ್ಟ್ರಪತಿ ಭವನದಲ್ಲಿ ಅನುಮಾನಾಸ್ಪದ ಪ್ರಾಣಿಯ ಚಲನವಲನ ಸಂಚಲನ ಮೂಡಿಸಿದೆ. ಜೂನ್ 9, ಭಾನುವಾರ ಕೇಂದ್ರ ಸಚಿವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಾಗ ಹಿಂದೆ ಪ್ರಾಣಿಯೊಂದು ನಡೆದುಕೊಂಡು ಬರುತ್ತಿರುವುದು ಕಂಡುಬಂದಿದೆ. ಅದು ಚಿರತೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಆದರೆ, ರಾಷ್ಟ್ರಪತಿ ಭವನದಲ್ಲಿ ಚಿರತೆಗಳನ್ನು ಸಾಕಲಾಗುತ್ತದೆಯೇ ಎಂದು ಹಲವಾರು ಮಂದಿ ಕಮೆಂಟ್‌ ಮಾಡುತ್ತಿದ್ದಾರೆ… ಈ ಬಗ್ಗೆ ರಾಷ್ಟ್ರಪತಿ ಭವನದಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

ದುರ್ಗಾ ದಾಸ್ ಅವರು ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ರಿಜಿಸ್ಟರ್‌ಗೆ ಸಹಿ ಹಾಕುತ್ತಿದ್ದಾಗ, ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನದ ಮೆಟ್ಟಿಲುಗಳ ಮೇಲೆ ಪ್ರಾಣಿಯೊಂದು ಹಾದು ಹೋಗುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ವಿಡಿಯೋ ವೈರಲ್ ಆಗಿದೆ. ವೀಡಿಯೋ ನೋಡಿದವರೆಲ್ಲ ನಾನಾ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ನೀವು ರಾಷ್ಟ್ರಪತಿ ಭವನದಲ್ಲಿ ಚಿರತೆಗಳನ್ನು ಸಾಕುತ್ತೀರಾ? ಆ ಸಾಧ್ಯತೆ ಇದೆಯೇ ಎಂಬ ನಾನಾ ಅನುಮಾನಗಳು ಮೂಡುತ್ತಿವೆ. ಕೆಲವರು ಅದು ನಾಯಿ ಇರಬಹುದು ಎಂದೂ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ..

Share Post