CrimeDistricts

ವ್ಯಕ್ತಿಯನ್ನು ಕಲ್ಲಿನಿಂದ ಜಜ್ಜಿ ಭೀಕರ ಹತ್ಯೆ; ಅನೈತಿಕ ಸಂಬಂಧವೇ ಕಾರಣವಾ..?

ಕಲಬುರಗಿ; ಬುದ್ಧಿ ಹೇಳಿದನೆಂಬ ಕಾರಣಕ್ಕೆ ಮೈದುನನನ್ನು ಕಲ್ಲಿನಿಂದ ಜಜ್ಜಿ ಜಜ್ಜಿ ಭೀಕರವಾಗಿ ಕೊಲೆ ಮಾಡಲಾಗಿದೆ.. ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮುನ್ನೊಳ್ಳಿ ಗ್ರಾಮದ 35 ವರ್ಷದ ಹೀರಾಲಾಲ್‌ ಲದಾಫ್‌ ಎಂಬಾತನೇ ಕೊಲೆಯಾದ ವ್ಯಕ್ತಿ..

ರವಿ ಎಂಬಾತನೇ ಕೊಲೆ ಮಾಡಿದ ಆರೋಪಿ… ಕೊಲೆಯಾದ ಹೀರಾಲಾಲ್‌ ಲದಾಫ್‌ ಅವರ ಅಣ್ಣ ಬಾಬು ಲದಾಫ್‌ ಪತ್ನಿಯ ಜೊತೆ ಆರೋಪಿ ರವಿ ಅನೈತಿಕ ಸಂಬಂಧ ಹೊಂದಿದ್ದನಂತೆ.. ಹೀಗಾಗಿ ಬಾಬು ಲದಾಫ್‌ ಪತ್ನಿಗೆ ಹಲವು ಬಾರಿ ಬುದ್ಧಿವಾದ ಹೇಳಿದ್ದಾನೆ.. ಇದರಿಂದ ಆಕ್ರೋಶಗೊಂಡ ಪತ್ನಿ ತನ್ನ ಪ್ರಿಯಕರ ರವಿ ಜೊತೆ ಸೇರಿಕೊಂಡು ಗಂಡ ಬಾಬು ಲದಾಫ್‌ ಮೇಲೆ ಹಲ್ಲೆ ಮಾಡಿದ್ದಾಳೆ.. ಈ ಕಾರಣದಿಂದ ಮನನೊಂದ ಬಾಬು ಲದಾಫ್‌ ಊರೇ ಬಿಟ್ಟು ಹೋಗಿದ್ದಾರೆ..

ಅಣ್ಣನ ಸಂಸಾರ ಹಾಳಾಗಿದ್ದು ನೋಡಿ ತಮ್ಮ ಹೀರಾಲಾಲ್‌ ಲದಾಫ್‌ ನೊಂದುಕೊಂಡಿದ್ದ.. ಅಣ್ಣ ಸಂಸಾರ ಸರಿದಾರಿಗೆ ತರುವ ಸಲುವಾಗಿ ಆರೋಪಿ ರವಿಯ ಜೊತೆ ಹೀರಾಲಾಲ್‌ ಮಾತನಾಡಿದ್ದಾರೆ.. ಅಣ್ಣ ಪತ್ನಿ ಜೊತೆ ಅನೈತಿಕ ಸಂಬಂಧ ಬಿಡುವಂತೆ ಮನವಿ ಮಾಡಿಕೊಂಡಿದ್ದಾನೆ.. ಇಷ್ಟಕ್ಕೇ ರವಿ ಆಕ್ರೋಶಗೊಂಡಿದ್ದಾನೆ.. ಇದೇ ವಿಚಾರವಾಗಿ ಕುಡಿದ ನಶೆಯಲ್ಲಿದ್ದ ಇಬ್ಬರೂ ಜಗಳ ಮಾಡಿಕೊಂಡಿದ್ದಾರೆ.. ಇದ್ದಕ್ಕಿದ್ದಂತೆ ರವಿ, ಹೀರಾಲಾಲ್‌ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ.. ತಲೆಯನ್ನು ಜಜ್ಜಿ ಜಜ್ಜಿ ಕೊಲೆ ಮಾಡಿದ್ದಾನೆ..

ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ..

Share Post