BengaluruCrime

ಜೊತೆಯಲ್ಲೇ ಎಣ್ಣೆ ಹೊಡೆದ, ಕೊಲೆಗೆ ಮುಹೂರ್ತ ಇಟ್ಟ; ಕುಡಿದ ಮತ್ತಲ್ಲಿ ಕೊಂದೇಬಿಟ್ಟ!

ಬೆಂಗಳೂರು; ಒಂದೇ ತಟ್ಟೇಲಿ ಊಟ ಮಾಡಿ ಸ್ಕೆಚ್‌ ಹಾಕ್ತಾರೋ.. ಎಂಬ ಹಾಡೊಂದಿದೆ.. ಅದೇ ತರದ ಸ್ಟೋರಿ ಇದು.. ಇಲ್ಲಿ ಒಟ್ಟಿಗೆ ಕಂಠಪೂರ್ತಿ ಕುಡಿದಿದ್ದಾರೆ.. ಇದೇ ವೇಳೆ ಒಬ್ಬ ತನ್ನ ಜೊತೆ ಕುಡಿದ ಸ್ನೇಹಿತನಿಗೇ ಮುಹೂರ್ತ ಇಟ್ಟಿದ್ದಾನೆ.. ಕಂಠಪೂರ್ತಿ ಕುಡಿಸಿದ ನಂತರ ತಲೆ ಮೇಲೆ ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಲಾಗಿದೆ.. ಬೆಂಗಳೂರಿನ ಯಲಹಂಕ ನ್ಯೂಟೌನ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ..

ಗಜೇಂದ್ರ ಹಾಗೂ ಸಂತೋಷ್‌ ಎಂಬುವವರು ಆತ್ಮೀಯ ಸ್ನೇಹಿತರಾಗಿದ್ದರು.. ಇಬ್ಬರೂ ಚಿಕ್ಕಬೊಮ್ಮಸಂದ್ರದ ತಿರುಪತಿ ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದರು.. ಅದ್ಯಾವುದೋ ವಿಚಾರಕ್ಕೆ ಇತ್ತೀಚೆಗೆ ಇಬ್ಬರ ನಡುವೆ ಗಲಾಟೆ ನಡೆದಿತ್ತು.. ಇದ್ರಿಂದ ಕೋಪಗೊಂಡಿದ್ದ ಸಂತೋಷ್‌, ಗಜೇಂದ್ರನ ಕೊಲೆಗೆ ಸ್ಕೆಚ್‌ ಹಾಕಿದ್ದ.. ಇದಕ್ಕಾಗಿ ಆತ ಗಜೇಂದ್ರನನ್ನು ಪುಸಲಾಯಿಸಿ ಎಣ್ಣೆ ಹೊಡೆಯಲು ಕರೆದುಕೊಂಡು ಬಂದಿದ್ದ.. ನಿನ್ನೆ ಸಂಜೆ ಯಲಹಂಕ ಡೈರಿ ಸರ್ಕಲ್ ಹತ್ತಿರದ ಬಿಂದಾಸ್ ಬಾರ್ ನಲ್ಲಿ ಇಬ್ಬರೂ ಕಂಠಪೂರ್ತಿ ಕುಡಿದಿದ್ದಾರೆ..

ಅನಂತರ ಗಜೇಂದ್ರ ಬಾರ್‌ ಪಕ್ಕದ ಖಾಲಿ ಜಾಗದಲ್ಲಿ ಕುಳಿತಿದ್ದ.. ಇದೇ ಸಮಯ ಎಂದು ಸಂತೋಷ್‌ ಇಟ್ಟಿಗೆ ತೆಗೆದುಕೊಂಡು ಬಂದು ತಲೆಗೆ ಹೊಡೆದು ಸಾಯಿಸಿಬಿಟ್ಟಿದ್ದಾನೆ.. ನೇಪಾಳ ಮೂಲದ ಮೃತ ಗಜೇಂದ್ರ ಕೆಲಸ ಅರಸಿ ಕಳೆದ ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಎನ್ನಲಾಗಿದೆ. ಈ ಬಗ್ಗೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

Share Post