BengaluruCrime

ತಾಯಿ-ಮಗಳ ನಡುವೆ ಪರಸ್ಪರ ಚಾಕು ಇರಿತ; ಪುತ್ರಿ ದುರ್ಮರಣ

ಬೆಂಗಳೂರು; ಪಿಯುಸಿಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ತಾಯಿ ಹಾಗೂ ಮಗಳ ನಡುವೆ ಜಗಳ ನಡೆದಿದ್ದು, ಅದು ವಿಕೋಪಕ್ಕೆ ತಿರುಗಿದೆ.. ಇಬ್ಬರು ಚಾಕುವಿನಿಂದ ಪರಸ್ಪರ ಚುಚ್ಚಿಕೊಂಡಿದ್ದಾರೆ.. ಘಟನೆಯಲ್ಲಿ ಮಗಳು ಸಾವನ್ನಪ್ಪಿದ್ದು, ತಾಯಿ ಆಸ್ಪತ್ರೆ ಸೇರಿದ್ದಾಳೆ..

ಇದನ್ನೂ ಓದಿ; ಪ್ರಜ್ವಲ್‌ಗಿಂತ ಡಿಕೆಶಿ ಮಹಾನ್‌ ಅಪರಾಧ ಮಾಡಿದ್ದಾರೆ; ಹೆಚ್‌.ಡಿ.ಕುಮಾರಸ್ವಾಮಿ

ಬೆಂಗಳೂರಿನ ಬನಶಂಕರಿಯ ಶಾಸ್ತ್ರಿ ನಗರದ 3ನೇ ಕ್ರಾಸ್‌ನಲ್ಲಿ ಈ ಘಟನೆ ನಡೆದಿದೆ.. ತಾಯಿ ಪದ್ಮಜ ಅವರು ದ್ವಿತೀಯ ಪಿಯುಸಿ ಓದುತ್ತಿದ್ದ ಮಗಳ ಸಾಹಿತಿ ಕಡಿಮೆ ಅಂಕ ಗಳಿಸಿದ್ದಕ್ಕೆ ಪ್ರಶ್ನೆ ಮಾಡಿದ್ದಾರೆ.. ಇದೇ ವಿಚಾರವಾಗಿ ತಾಯಿ-ಮಗಳ ನಡುವೆ ಜೋರು ಜಗಳವಾಗಿದೆ.. ಕೊನೆಗೆ ಇಬ್ಬರೂ ಚಾಕು ಹಿಡಿದುಕೊಂಡು ಕಿತ್ತಾಡಿದ್ದಾರೆ..

ಇದನ್ನೂ ಓದಿ; ಆಪಲ್‌ ತಿಂದರೆ ದೇಹದ ತೂಕ ಕಡಿಮೆಯಾಗುತ್ತದಂತೆ!

ಒಬ್ಬರಿಗೊಬ್ಬರು ಚಾಕುವಿನಿಂದ ಚುಚ್ಚಿಕೊಂಡಿದ್ದು, ಘಟನೆಯಲ್ಲಿ ತೀವ್ರ ರಕ್ತಸ್ರಾವದಿಂದ ಮಗಳು ಸಾಹಿತಿ ಸಾವನ್ನಪ್ಪಿದ್ದಾಳೆ.. ತಾಯಿ ಪದ್ಮಜಾಗೆ ನಾಲ್ಕೈದು ಕಡೆ ಇರಿದ ಗಾಯಗಳಾಗಿದ್ದು, ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.. ಬನಶಂಕರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

 

Share Post