Politics

ಬಿಜೆಪಿಗೆ ನೆಲೆ ಇಲ್ಲ ಎಂದವರ ವಿರುದ್ಧ ಸಚಿವ ಸುಧಾಕರ್‌ ಆಕ್ರೋಶ

ಚಿಕ್ಕಬಳ್ಳಾಪುರ: ವಿಧಾನಪರಿಷತ್‌ ಚುನಾವಣೆಯಲ್ಲಿ ಕೋಲಾರ-ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಗೆ ನೆಲೆ ಇಲ್ಲ ಎಂದವರ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್‌ ಕಿಡಿ ಕಾರಿದ್ದಾರೆ. ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಮತದಾನ ಮಾಡಿದ ಬಳಿಕ ಮಾತನಾಡಿದ ಸುಧಾಕರ್‌, ಎರಡೂ ಜಿಲ್ಲೆಗಳಲ್ಲಿ ಬಿಜೆಪಿ ಗೆಲುವಿಗೆ ಪೂರಕ ವಾತಾವರಣ ಇದೆ. 500ಮತ ಬರಲ್ಲ ಅಂತ ಹೇಳಿದ್ರಲ್ಲ ಅಂತವರಿಗೆಲ್ಲ ತಕ್ಕ ಉತ್ತರವನ್ನು ಈ ಚುನಾವಣೆಯಲ್ಲಿ ನಾವು ನೀಡ್ತೇವೆ ಎಂದು ಟಾಂಗ್‌ ನೀಡಿದ್ರು. ಚುನಾವಣೆಯಲ್ಲಿ ಹಣ ಹಂಚಿಕೆ, ಆಣೆ ಪ್ರಮಾಣದ ಬಗ್ಗೆ ತನಿಖೆ ನಡೆಸುವಂತೆ ಆದೇಶ ನೀಡಿದ್ರು.  ಜೊತೆಗೆ ಎಲ್ಲಾ ತಾಲೂಕುಗಳಿಗೆ ಭೇಟಿ ನೀಡಿ ಮೇಲ್ವಿಚಾರಣೆ ನಡೆಸುವಂತೆ ಮುಖಂಡರಿಗೆ ಸಚಿವ ಸುಧಾಕರ್‌ ಸೂಚಿಸಿದರು.

 

Share Post