BengaluruCrime

Double Murder; ಆ ವಿಚಾರಕ್ಕಾಗಿ ನಡೆಯಿತಾ ಈ ಡಬಲ್‌ ಮರ್ಡರ್‌..?

ಬೆಂಗಳೂರು; ಬೆಂಗಳೂರಿನ ಹೃದಯಭಾಗದಲ್ಲಿ ರಾತ್ರಿ ಭೀಕರ ಡಬಲ್‌ ಮರ್ಡರ್‌ (Double Murder) ನಡೆದಿದೆ. ಆಸ್ತಿ ವಿಚಾರಕ್ಕೆ ಒಬ್ಬ ವ್ಯಕ್ತಿಯ ಕೊಲೆ ಮಾಡಿದ್ದು, ಈ ವೇಳೆ ಸ್ನೇಹಿತನ ಪ್ರಾಣ ಕಾಪಾಡೋಕೆ ಬಂದವನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಮೆಜೆಸ್ಟಿಕ್‌ ಬಳಿಯೇ ಇರುವ ಕುಂಬಾರಪೇಟೆಯಲ್ಲಿ (Kumabarapet) ಈ ಭಯಂಕರ ದಬಲ್‌ ಮರ್ಡರ್‌ ನಡೆದಿದ್ದು, ಬೆಂಗಳೂರು ಬಿದ್ದಿದೆ. ಬೆಂಗಳೂರಿನಲ್ಲಿ ಇಂತಹ ಕೃತ್ಯಗಳು ಆಗಾಗ ನಡೆಯುತ್ತಿದ್ದರೂ, ಇದು ಎಲ್ಲರ ಎದುರಲ್ಲೇ ಜನರು ಓಡಾಡುತ್ತಿರುವಾಗಲೇ ನಡೆದ ಘಟನೆಯಾದ್ದರಿಂದ ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ.

ರಾತ್ರಿ 8 ಗಂಟೆ ಸುಮಾರಿಗೆ ನಡೆಯಿತು ಕೃತ್ಯ

ಅದು ರಾತ್ರಿ ಎಂಟು ಗಂಟೆ ಸಮಯ.. ಹಲಸೂರು ಗೇಟ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಕುಂಬಾರ ಪೇಟೆಯ ಶ್ರೀಹರಿ ಮಾರ್ಕೆಟಿಂಗ್‌ ಕಚೇರಿಯಲ್ಲಿ ರಕ್ತದೋಕುಳಿ ಹರಿದಿದೆ. ಕಚೇರಿ 55 ವರ್ಷದ ಸುರೇಶ್‌ ಹಾಗೂ 68 ವರ್ಷದ ಮಹೇಂದ್ರ (suresh and mahendra) ಎಂಬುವವರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಭದ್ರ ಎಂಬಾತ ಈ ಇಬ್ಬರನ್ನು ಕೊಲೆ ಮಾಡಿದ್ದು, ಕೊಲೆ ಮಾಡಿನ ನಂತರ ಕೊಲೆ ನಾನೇ ಮಾಡಿದ್ದು ಅಂತ ಹೇಳಿಕೊಂಡು ಬಂದು ಪೊಲೀಸರ ಮುಂದೆ ಶರಣಾಗಿಬಿಟ್ಟಿದ್ದಾನೆ. ಈ ಕೊಲೆಗೆ ಒಂದು ಕಟ್ಟಡ ವಿವಾದವೇ ಕಾರಣ ಅನ್ನೋದು ಬಹಿರಂಗವಾಗಿದೆ.

ಆಸ್ತಿ ವಿಚಾರಕ್ಕೆ ವ್ಯಕ್ತಿ ಮರ್ಡರ್‌, ಅಡ್ಡ ಬಂದಿದ್ದಕ್ಕೆ ಸ್ನೇಹಿತನೂ ಕೊಲೆ..!

ಭೀಕರ ಕೊಲೆಗೀಡಾಗಿರುವ ಸುರೇಶ್‌ ಇದೇ ಕುಂಬಾರಪೇಟೆಯಲ್ಲಿ ಕಮರ್ಷಿಯಲ್‌ ಕಟ್ಟಡವೊಂದನ್ನು ಹೊಂದಿದ್ದಾರೆ. ಅದರಲ್ಲಿ ಬ್ಯುಸಿನೆಸ್‌ ಕೂಡಾ ನಡೆಸ್ಕೊಂಡು ಹೋಗ್ತಿದ್ದಾರೆ. ಇನ್ನೊಂದೆಡೆ ಆರೋಪಿ ಭದ್ರ ಕುಂಬಾರ ಸಮುದಾಯದ ಟ್ರಸ್ಟ್‌ ನಡೆಸುತ್ತಿದ್ದಾನೆ. ಇಬ್ಬರೂ ದೂರದ ಸಂಬಂಧಿಗಳು ಕೂಡಾ. ಆದ್ರೆ ಸುರೇಶ್‌ ಅವರ ಕಟ್ಟಡದ ಬಗ್ಗೆ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ನಿನ್ನ ಕಟ್ಟಡದ ಜಾಗ ಕುಂಬಾರ ಟ್ರಸ್ಟ್‌ಗೆ ಸೇರಿದ್ದು, ಅದನ್ನು ಬರೆದುಕೊಡು ಎಂದು ಭದ್ರ ಆಗಾಗ ಸುರೇಶ್‌ಗೆ ಕೇಳುತ್ತಿದ್ದನಂತೆ. ಇದೇ ವಿಚಾರವಾಗಿ ಇಬ್ಬರ ನಡುವೆ ಆಗಾಗ ಜಗಳಗಳು ಆಗುತ್ತಿದ್ದವು. ಈ ವಿಚಾರ ಪೊಲೀಸ್‌ ಠಾನೆಯ ಮೆಟ್ಟಿಲೂ ಏರಿತ್ತು. ಇದೇ ವಿಚಾರವಾಗಿ ಮಾತನಾಡಲು ಬಂದಿದ್ದ ಭದ್ರ, ಚಾಕುವಿನಿಂದ ಚುಚ್ಚಿ ಚುಚ್ಚಿ ಸುರೇಶ್‌ ಅವರನ್ನು ಕೊಲೆ ಮಾಡಿದ್ದಾನೆ. ಇದೇ ವೇಳೆ ಭದ್ರನಿಗೆ ಸಂಬಂಧವೇ ಇಲ್ಲದ ಮಹೇಂದ್ರ ಅವರು ಸ್ನೇಹಿತ ಸುರೇಶ್‌ ರಕ್ಷಣೆಗೆ ಬಂದಿದ್ದಾರೆ. ಇದ್ರಿಂದ ರೊಚ್ಚಿಗೆದ್ದ ಭದ್ರ ಮಹೇಂದ್ರ ಅವರನ್ನೂ ಕೊಂದಿದ್ದಾನೆ.

ಕಚೇರಿಯಲ್ಲಿ ಸ್ನೇಹಿತನ ಜೊತೆ ಕೂತಿದ್ದ ಮಹೇಂದ್ರ

ರಾತ್ರಿ ಶ್ರೀಹರಿ ಮಾರ್ಕೆಟಿಂಗ್ ಕಚೇರಿಯಲ್ಲಿ ಸುರೇಶ್‌ ಜೊತೆಯೇ ಸ್ನೇಹಿತ ಮಹೇಂದ್ರ ಕೂತಿದ್ದರು. ಇದೇ ವೇಳೆ ಕಚೇರಿಗೆ ಭದ್ರ ನುಗ್ಗಿದ್ದಾನೆ. ಜಗಳ ತೆಗೆದಿದ್ದಾನೆ. ಚೂಕು ಹೊರತೆಗೆದು ಚುಚ್ಚಿಬಿಟ್ಟಿದ್ದಾನೆ. ಇದನ್ನೇ ಸ್ನೇಹಿತನಾದವನು ನೋಡಿಕೊಂಡು ಸುಮ್ಮನಿರುತ್ತಾನಾ..? ಸಾಧ್ಯವಿಲ್ಲ. ಹೀಗಾಗಿ ಸ್ನೇಹಿತನನ್ನು ಉಳಿಸೋದಕ್ಕಾಗಿ ಮಹೇಂದ್ರ ಅವರು ಪ್ರಯತ್ನ ಪಟ್ಟಿದ್ದಾರೆ. ಈ ವೇಳೆ ಭದ್ರ ಅಡ್ಡ ಬಂದ ಮಹೇಂದ್ರ ಅವರಿ ಎದೆಗೂ ಬರ್ಬರವಾಗಿ ಚುಚ್ಚಿ ಕೊಂದಿದ್ದಾರೆ. ಜೋರಾಗಿ ಕಿರುಚಾಟ ಕೇಳುತ್ತಿದ್ದರೂ ಅಕ್ಕಪಕ್ಕದವರು ಅಲ್ಲಿ ಹೋಗೋದಕ್ಕೆ ಹೆದರಿದ್ದಾರೆ. ಇಬ್ಬರೂ ಕೊಂದು ಮುಗಿಸಿದ ಮೇಲೆ ಆರೋಪಿ ಭದ್ರ ನೇರವಾಗಿ ಪೊಲೀಸ್‌ ಠಾಣೆಗೆ ಹೋಗಿ ಶರಣಾಗಿದ್ದಾನೆ.

 

Share Post