Cinema

ನೆರೆ ಸಂತ್ರಸ್ತರ ನೆರವಿಗೆ ನಿಂತ ನಟ ಪ್ರಭಾಸ್

ಹೈದರಾಬಾದ್:‌  ನೆರೆ ಸಂತ್ರಸ್ರರ ನೆರವಿಗಾಗಿ ನಟ ಪ್ರಭಾಸ್‌ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಅಕಾಲಿಕ ಮಳೆಯಿಂದಾಗಿ ಆಂಧ್ರಪ್ರದೇಶದಲ್ಲಿ ಉಂಟಾದ ಪ್ರವಾಹಕ್ಕೆ ಜನ ಅಕ್ಷರಶಃ ತತ್ತರಿಸಿದ್ದರು, ಆಹಾರ-ಸೂರಿಲ್ಲದೆ ಜನ ಕಂಗೆಡುವ ಪರಿಸ್ಥಿತಿ ಏರ್ಪಾಡಾಗಿದೆ. ಮಳೆ ನಿಂತರೂ ಅದರ ಪ್ರಭಾವ ಮಾತ್ರ ಕಡಿಮೆಯಾಗಿಲ್ಲ ವಾಸಿಸಲು ಮನೆಯಿಲ್ಲದೆ ಎಲ್ಲವನ್ನು ಕಳೆದುಕೊಂಡು ಬೀದಿಗೆ ಬಂದ ಜನರ ಕಂಬನಿಗೆ ಚಿತ್ರನಟ ಪ್ರಭಾಸ್‌ ಮರುಗಿದ್ದಾರೆ. ಪ್ರವಾಹ ಸಂತ್ರಸ್ತರ ನೆರವಿಗೆ 1ಕೋಟಿ ರೂಪಾಯಿಯನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ಹಣಕಾಸು ನಿಧಿಗೆ  ನೀಡಿದ್ದಾರೆ. ಪ್ರಭಾಸ್‌ ಈ ಸಾಮಾಜ ಸೇವೆಗೆ ಅಭಿಮಾನಿಗಳು ಫುಲ್‌ ಫಿದಾ ಆಗಿದ್ದಾರೆ. ಪ್ರಭಾಸ್‌ ಹೊರತುಪಡಿಸಿ ಪ್ರಿನ್ಸ್‌ ಮಹೇಶ್‌ ಬಾಬು, ಅಕ್ಕಿನೇನಿ ನಾಗಾರ್ಜುನ, ರಾಮ್‌ಚರಣ್‌ ತೇಜ ಕೂಡ ಸಹಾಯಧನ ನೀಡಿದ್ದಾರೆ ಎನ್ನಲಾಗಿದೆ.

Share Post