CrimeNational

ಮಗ ಆತ್ಮಹತ್ಯೆ ಮಾಡಿಕೊಂಡ 13 ದಿನಕ್ಕೆ ತಂದೆ ಸೂಸೈಡ್‌!

ಮಂಗಳೂರು; ಆರು ವರ್ಷದ ಸಹೋದರ ಹೊಟ್ಟೆಯ ಮೇಲೆ ಕಚ್ಚಿದ್ದಕ್ಕೆ 14 ವರ್ಷ ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದ. ಇದರಿಂದ ಸಾಕಷ್ಟು ನೊಂದಿದ್ದ ತಂದೆ ಮಗ ಆತ್ಮಹತ್ಯೆ ಮಾಡಿಕೊಂಡ 13 ದಿನಕ್ಕೆ ನೇಣಿಗೆ ಶರಣಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ಉಜಿರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪೆರ್ಲ ನಿವಾಸಿ ಯೋಗೀಶ್‌ ಪೂಜಾರಿ ಎಂಬುವವರೇ ಆತ್ಮಹತ್ಯೆ ಮಾಡಿಕೊಂಡವರು.  ಜನವರಿ 4ರಂದು ಯೋಗೀಶ್‌ ಅವರ 14 ವರ್ಷದ ಮಗ ಯಕ್ಷಿತ್‌ ನೇಣಿಗೆ ಶರಣಾಗಿದ್ದ. ತನ್ನ ಕಿರಿಯ ಸಹೋದರ ಗಲಾಟೆ ಮಾಡಿಕೊಂಡು ಯಕ್ಷಿತ್‌ ಹೊಟ್ಟೆ ಮೇಲೆ ಕಚ್ಚಿದ್ದ. ಇದರಿಂದ ಮನನೊಂದು ಯಕ್ಷಿತ್‌, ಮನೆಯ ಕೊಠಡಿಯಲ್ಲಿ ತಾಯಿಯ ಸೀರೆ ಬಳಸಿ ನೇಣಿಗೆ ಶರಣಾಗಿದ್ದ.

ಇದರಿಂದ ತೀವ್ರವಾಗಿ ನೊಂದಿದ್ದ ತಂದೆ ಯೋಗೀಶ್‌ ಪೂಜಾರಿ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 

Share Post