Bengaluru

ತಾಯಿಯೇ ಮಗು ಕೊಂದ ಪ್ರಕರಣ; ಹರಿಶ್ಚಂದ್ರ ಘಾಟ್‌ನಲ್ಲಿ ಮಗುವಿನ ಅಂತ್ಯಕ್ರಿಯೆ

ಬೆಂಗಳೂರು; ಸ್ಟಾರ್ಟ್‌ ಅಪ್‌ ಕಂಪನಿಯ ಮಹಿಳಾ ಸಿಇಒ ಸುಚನಾ, ಗೋವಾದಲ್ಲಿ ತನ್ನದೇ ನಾಲ್ಕು ವರ್ಷದ ಮಗನನ್ನು ಕೊಂಡು ಚಿತ್ರದುರ್ಗ ಬಳಿ ಸಿಕ್ಕಿಬಿದ್ದಿದ್ದಳು. ಇದೀಗ ಮಗುವಿನ ಅಂತ್ಯಕ್ರಿಯೆಯನ್ನು ಮಗುವಿನ ತಂದೆ ನೆರವೇರಿಸಿದ್ದಾರೆ. ಮಲ್ಲೇಶ್ವರಂ ಬಳಿ ಇರುವ ಹರಿಶ್ಚಂದ್ರ ಘಾಟ್‌ನಲ್ಲಿ ಇಂದು ಬೆಳಗ್ಗೆ ಮಗುವಿನ ತಂದೆ ವೆಂಕಟರಮಣ, ಮಗುವಿನ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಮಗುವನ್ನು ತಮ್ಮ ಕೈಯಲ್ಲೇ ಹೊತ್ತೊಯ್ದ ತಂದೆ ವೆಂಕಟರಮಣ ವಿಧಿವಿಧಾನಗಳನ್ನು ನೆರವೇರಿಸಿ ಅಂತ್ಯಕ್ರಿಯೆ ಮಾಡಲಾಗಿದೆ. ಇದೇ ವೇಳೆ ಹಲವು ಸಂಬಂಧಿಕರು ಕೂಡಾ ಹಾಜರಿದ್ದರು. ನಿನ್ನೆ ಹಿರಿಯೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿನ ಮರಣೋತ್ತರ ಪರೀಕ್ಷೆ ಮಾಡಲಾಗಿತ್ತು. ಅನಂತರ ಬೆಂಗಳೂರಿಗೆ ಮೃತದೇಹ ರವಾನಿಸಲಾಗಿತ್ತು.

ಮಧ್ಯರಾತ್ರಿ 1:45 ಕ್ಕೆ ಮಗುವಿನ ಮೃತದೇಹ ಯಶವಂತಪುರ ಬಳಿಇರುವ ಬ್ರಿಗೇಡ್ ಗೇಟ್ ವೇ ರೆಸಿಡೆನ್ಸಿಗೆ ಬಂದಿತ್ತು.

 

 

Share Post