CrimeNational

ಪ್ರತಾಪ ಸಿಂಹ ಕಚೇರಿಯಿಂದ 3 ಬಾರಿ ಪಾಸ್‌ ಪಡೆದಿದ್ದನಾ ಮನೋರಂಜನ್‌..?

ನವದೆಹಲಿ; ಮೈಸೂರು ಮೂಲದ ಮನೋರಂಜನ್‌ ಹಾಗೂ ಉತ್ತರ ಪ್ರದೇಶದ ಮತ್ತೊಬ್ಬ ಯುವಕ  ನಿನ್ನೆ ಲೋಕಸಭಾ ಕಲಾಪಕ್ಕೆ ನುಗ್ಗಿದ್ದರು. ಹೀಗಾಗಿ ಭದ್ರತಾಲೋಪದ ಬಗ್ಗೆ ಕೇಂದ್ರ ಸರ್ಕಾರ ಉತ್ತರ ಕೊಡಬೇಕೆಂದು ಪ್ರತಿಪಕ್ಷಗಳು ಪಟ್ಟು ಹಿಡಿದಿವೆ. ಈ ಬೆನ್ನಲ್ಲೇ ಮೈಸೂರಿನ ಮನೋರಂಜನ್‌ ಸಂಸತ್ತಿಗೆ ಪಾಸ್‌ ಪಡೆದುಕೊಂಡಿರುವುದು ಇದೇ ಮೊದಲಲ್ಲ. ಮೂರು ಬಾರಿ ಪಾಸ್‌ ಪಡೆದಿದ್ದ ಎಂದು ಹೇಳಲಾಗುತ್ತಿದೆ. ಸಂಸದ ಪ್ರತಾಪ ಸಿಂಹ ಕಚೇರಿಯಿಂದಲೇ ಮನೋರಂಜನ್‌ ಮೂರು ಬಾರಿ ಪಾಸ್‌ ಪಡೆದಿದ್ದನಂತೆ!

ಮನೋರಂಜನ್‌ ಕಳೆದ ಅಧಿವೇಶನದ ಸಮಯದಲ್ಲೂ ಪಾಸ್‌ ಪಡೆದಿದ್ದ. ಹೊಸ ಸಂಸತ್‌ ವೀಕ್ಷಣೆ ಮಾಡಬೇಕೆಂದು ಹೇಳಿಕೊಂಡು ಪಾಸ್‌ ಪಡೆದಿದ್ದ ಮನೋರಂಜನ್‌, ವೀಕ್ಷಕರ ಗ್ಯಾಲರಿವರೆಗೂ ಇರುವ ಭದ್ರತಾ ವ್ಯವಸ್ಥೆ ಬಗ್ಗೆ ಅಧ್ಯಯನ ಮಾಡಿದ್ದ ಎನ್ನಲಾಗಿದೆ. ಅದಾದ ನಂತರ ಆತ ನಿನ್ನೆ ಕಲಾಪಕ್ಕೆ ನುಗ್ಗಿದ್ದಾನೆ ಎನ್ನಲಾಗಿದೆ.

 

Share Post